ಈಗಿನ ರೌಡಿಗಳೇ ಮುಂದಿನ ಬಿಜೆಪಿ ನಾಯಕರು – ಕುಟುಕಿದ ಡಾ. H C ಮಹದೇವ

Team Newsnap
1 Min Read

ರಾಜ್ಯದಲ್ಲಿ ರೌಡಿಗಳು ರಾಜಕಿಯಕ್ಕೆ ಪ್ರವೇಶ ಆಗುತ್ತಿರುವ ಬಗ್ಗೆ ಭಾರೀ ಚರ್ಚೆ ನಡುವೆ ಕಾಂಗ್ರೆಸ್​ನ ಮಾಜಿ H C ಮಹದೇವ ವಿವಾದಾತ್ಮಕ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್​ನ ಹೆಚ್​ಸಿ.ಮಹದೇವಪ್ಪ ಟ್ವೀಟ್​ ಮಾಡಿ ಇಂದಿನ ರೌಡಿಗಳೇ ಮುಂದಿನ ಕರ್ನಾಟಕ ಬಿಜೆಪಿಯ ಮುಖಂಡರಾಗ್ತಾರೆ. ಇದು ವಾಸ್ತವ ಎಂದು ಆರೋಪಿಸಿದ್ದಾರೆ.

ರೌಡಿಶೀಟರ್ಸ್ ಸೈಲೆಂಟ್​ ಸುನಿಲ್​, ಬೆತ್ತನಗೆರೆ ಶಂಕರ್​, ಫೈಟರ್​ ರವಿ ಸೇರಿದಂತೆ ಕೆಲವರು ಬಿಜೆಪಿಗೆ ಸೇರ್ಪಡೆ ಚರ್ಚೆ ಆಗ್ತಿದೆ. ಇದನ್ನು ಬಿಜೆಪಿಯ ಕೆಲವು ನಾಯಕರು ಸಮರ್ಥಿಸಿಕೊಳ್ತಿದ್ದಾರೆ. ಕುಮಾರಸ್ವಾಮಿ ಪ್ರಧಾನ ಮಂತ್ರಿಯಾದರೆ , ಜೆಡಿಎಸ್ ನಲ್ಲಿ ದಲಿತ, ಮುಸ್ಲಿಂಮರು CM ಗ್ಯಾರೆಂಟಿ – ಇಬ್ರಾಹಿಂ

ಆದರೆ ಕಾಂಗ್ರೆಸ್ ಇದನ್ನೇ ಅಸ್ತ್ರವನ್ನಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದೆ. ಇದೀಗ ಮಾಜಿ ಸಚಿವ ಹೆಚ್​.ಸಿ.ಮಹದೇವಪ್ಪ ಇಂದಿನ ರೌಡಿಗಳೇ ಮುಂದಿನ ಕರ್ನಾಟಕ ಬಿಜೆಪಿಯ ಮುಖಂಡರು ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a comment