ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ನನ್ನ ಮೇಲೆ ಸುಳ್ಳು ಭ್ರಷ್ಟಾಚಾರ ಆರೋಪ ಮಾಡುವವರು ಮೇಲುಕೋಟೆ ದೇವಸ್ಥಾನಕ್ಕೆ ಬರಲಿ ಆಣೆ ಮಾಡುತ್ತೇನೆ, ಜೆಡಿಎಸ್ ಶಾಸಕರುಗಳೂ ಆಣೆ ಮಾಡಲಿ ಎಂದು ಮಂಡ್ಯ ಸಂಸದೆ ಸುಮಲತಾ ಮಂಗಳವಾರ ಸವಾಲೆಸೆದರು.
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ನಾನು ಪ್ರಾಮಾಣಿಕವಾಗಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಕೆಲವರು ಅಂಬರೀಷ್ ಕುಟುಂಬದ ಮಿಥ್ಯಾರೋಪ ಮಾಡುತ್ತಾರೆ. ದೇವರು ನಮಗೆ ಎಲ್ಲಾ ಕೊಟ್ಟಿದ್ದಾನೆ. ಭ್ರಷ್ಟಾಚಾರ ಮಾಡಿ ಬದುಕುವ ಅನಿವಾರ್ಯತೆ ಇಲ್ಲ ಎಂದರು. ಇದನ್ನು ಓದಿ : 4 ಲಕ್ಷ ರು ಲಂಚ ಪಡೆದ BBMP ಅಧಿಕಾರಿ, ಪಿಎ ಬಂಧನ – ಲೋಕಾಯುಕ್ತರ ಮೊದಲ ಬಲಿಗೆ ಬಿದ್ದ ತಿಮಿಂಗಲು