ಶಿವಳ್ಳಿಯಲ್ಲಿ ವಿಶಿಷ್ಠ ರೀತಿಯಲ್ಲಿ ಸಂಸದೆ ಸುಮಲತಾ ಹುಟ್ಟುಹಬ್ಬ

Team Newsnap
1 Min Read

ಸಂಸದೆ ಸುಮಲತಾ ಅಂಬರೀಶ್ ರವರ ಜನ್ಮದಿನದ ಪ್ರಯುಕ್ತ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಶಿವಳ್ಳಿ ಗ್ರಾಮದ ದಾಸು ರವರ ಮನೆಯಲ್ಲಿ ಮನ-ಮನೆಯಲ್ಲಿ ಅಂಬರೀಶಣ್ಣ ಎಂಬ ವಿಶಿಷ್ಟ-ವಿನೂತನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶಿವಳ್ಳಿ ಗ್ರಾಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಜನ್ಮದಿನದ ಪ್ರಯುಕ್ತ ರೈತ ಸಂವಾದವನ್ನು ಬೇಲೂರು ಸೋಮಶೇಖರ್ ನಡೆಸಿಕೊಟ್ಟರು, ಇದೇ ಸಂದರ್ಭದಲ್ಲಿ ರೈತರು ಹಲವು ವಿಚಾರಗಳ ಸಂವಾದ ನಡೆಸಿದರು.

ಮಾಚಹಳ್ಳಿ ಗ್ರಾಮದ ವಿರಶೈವ ಮುಖಂಡರು ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಸ್ಥಾಪನೆಗೆ ಬೇಡಿಕೆ ಇಟ್ಟರು ಇದಕ್ಕೆ ಪೂರಕವಾಗಿ ಸ್ಪಂದಿಸುವ ಭರವಸೆಯನ್ನು ಸೋಮಶೇಖರ್ ನೀಡಿದರು.

ಮಂಡ್ಯ ನಗರದಲ್ಲಿ ಅಂಬರೀಶ್ ಪುತ್ಥಳಿ ಸ್ಥಾಪನೆಗೆ ಸ್ಪಂದಿಸಿದ ನಗರಸಭೆಯ ಅಧ್ಯಕ್ಷ ಮಂಜು ರವರನ್ನು ಸ್ಮರಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಶಿವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ, ಅಂಬರೀಶ್ ಅಭಿಮಾನಿ ದಾಸು, ಮಂಜು ಸೇರಿದಂತೆ ಶಿವಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ಕಾರ್ಯಕರ್ತರು ಭಾಗವಹಿಸಿದರು.

Share This Article
Leave a comment