ದಿನೇಶ್ ಗೂಳಿಗೌಡನನ್ನು ಕಿತ್ತು ಹಾಕಿದ್ದೇನೆ: ಅಪ್ಪಾಜಿಗೌಡ ಜಮೀನು – ಸೈಟ್ ಮಾಡುವ ಆಸಾಮಿ – ಎಸ್ ಟಿಎಸ್

Team Newsnap
1 Min Read
Dasara 2022- This time gold pass canceled: Minister Somashekhar ನಾಡಹಬ್ಬ ದಸರಾ - 2022 ಈ ಬಾರಿ ಗೋಲ್ಡ್‌ ಪಾಸ್‌ ರದ್ದು: ಸಚಿವ ಸೋಮಶೇಖರ್‌ ಸ್ಪಷ್ಟನೆ

ನನ್ನ ವಿಶೇಷ ಕತ೯ವ್ಯ ಅಧಿಕಾರಿಯನ್ನು ಒಂದು ವಾರದ ಹಿಂದೆಯೇ ಕಿತ್ತು ಹಾಕಿದ್ದೇನೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ಜನ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಸಚಿವ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ದಿನೇಶ್ ಗೂಳಿಗೌಡನ ಬಗ್ಗೆ ನಮ್ಮ ಪಕ್ಷದ ಹಿರಿಯರು ಕರೆ ಮಾಡಿ ನಮ್ಮ ಹುಡುಗನನ್ನು ನಿಮ್ಮ ಇಲಾಖೆಗೆ ತೆಗೆದುಕೊಳ್ಳಿ ಎಂದು ಸಲಹೆ ಕೊಟ್ಟರು.

ಅವರ ಮಾತಿಗೆ ಗೌರವ ಕೊಟ್ಟು ಆತನನ್ನು ವಿಶೇಷ ಅಧಿಕಾರಿ ಮಾಡಿಕೊಂಡೆ. ಆದರೆ ಆತ ವಾರದ ಹಿಂದೆ ನಮ್ಮ ಮನೆಗೆ ಬಂದವನು MLC ಟಿಕೆಟ್ ಆಕಾಂಕ್ಷಿತ. ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದೇನೆ ಎಂದು ಹೇಳಿದ್ದ.ಅಕೂಡಲೇ
ತಕ್ಷಣ ಆತನನ್ನು ತೆಗೆದುಹಾಕಿದ್ದೇನೆ ಎಂದರು.

ಮಾಜಿಸಿಎಂ ಎಸ್‌ಎಂ ಕೃಷ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಬಗ್ಗೆ ಎಸ್‌ಟಿಎಸ್ ಅಸಮಾಧಾನ ವ್ಯಕ್ತಡಿಸಿದರು.

ಜಮೀನು , ಸೈಟ್ ಮಾಡುವ ಆಸಾಮಿ :

ಹಾಲಿ MLC ಅಪ್ಪಾಜಿ ಗೌಡ ಮಾತ್ರ ಯಾವೊಬ್ಬ ಗ್ರಾ.ಪಂ ಸದಸ್ಯರ ಮನೆಗೆ ತೆರಳಿ ಒಂದು ಸ್ವೀಟ್ ಬಾಕ್ಸ್ ಕೂಡ ಕೊಟ್ಟವನಲ್ಲ ಎಂದು ಜೆಡಿಎಸ್ ಅಪ್ಪಾಜಿಗೌಡರ ಬಗ್ಗೆ ವಿಶ್ಲೇಷಣೆ ಮಾಡಿದರು.

ಎಲ್ಲಿ ಜಮೀನಿದೆ, ಎಲ್ಲಿ ಸೈಟ್ ಮಾಡಬಹುದು ಎಂಬ ಬಗ್ಗೆ ಗಮನಕೊಟ್ಟವನು ಅಪ್ಪಾಜಿಗೌಡ. ಜನಸೇವೆ ಮಾಡುವ ಭಾವನೆ ಆತನಲ್ಲಿಲ್ಲ.

Share This Article
Leave a comment