ನಾನು ಎಲ್ಲೇ ಹೋದರೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವೆ – ರೂಪಾ

Team Newsnap
1 Min Read

ಇಂದಿನಿಂದ ಹೊಸ ಹುದ್ದೆ ನಿಭಾಯಿಸಲಿದ್ದೇನೆ. ವರ್ಗಾವಣೆ ಆಗುವುದು ನನಗೆ ಬೇಸರವಿಲ್ಲ. ಮುಂದೆಯೂ ನನ್ನ ಕರ್ತವ್ಯ ಇದೇ ರೀತಿ ಭ್ರಷ್ಟಾಚಾರದ ವಿರುದ್ಧ ಕೆಲಸ ನಿರ್ವಹಿಸುವೆ ಎತ್ತಂಗಡಿ ಶಿಕ್ಷೆಗೆ ಗುರಿಯಾಗಿರುವ ಪೋಲಿಸ್ ಅಧಿಕಾರಿ ಡಿ ರೂಪಾ ತಿಳಿಸಿದ್ದಾರೆ.

ವರ್ಗಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೂಪಾ ನಾನು ಎಲ್ಲೆ ಕೆಲಸ ಮಾಡಿದರೂ ಭ್ರಷ್ಟಾಚಾರ ವಿರುದ್ದ ಹೋರಾಟ ಮಾಡುವೆ ಎಂದು ಹೇಳಿದ್ದಾರೆ.

ನನ್ನ ವೃತ್ತಿ ಜೀವನದ ವರ್ಷಗಳಿಗಿಂತ ಹೆಚ್ಚು ಬಾರಿ ನಾನು ವರ್ಗಾವಣೆ ಯಾಗಿದ್ದೇನೆ. ತಪ್ಪು ತೋರಿಸುವುದು, ಸತ್ಯಾಂಶ ಎತ್ತಿ ಹಿಡಿಯುವುದು ಯಾವಾಗಲೂ ಅಪಾಯದಿಂದ ಕೂಡಿರುತ್ತದೆ ಎಂಬುದು ನನಗೆ ತಿಳಿದಿದೆ ಎಂದಿದ್ದಾರೆ.

ಹುದ್ದೆ ಯಾವುದಾದರೂ ನಾನು ತಲೆ ಕೆಡಿಸಿಕೊಳ್ಳುದಿಲ್ಲ. ನಾನು ರಾಜಿಯಾಗದೆ ನನ್ನ ಕೆಲಸವನ್ನು ಮುಂದುವರಿಸುತ್ತೇನೆ. ನನ್ನ ವರ್ಗಾವಣೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ನಾನು ವರ್ಗಾವಣೆಯನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

ನನ್ನನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದೆ. ಈ ಹುದ್ದೆ ಒಪ್ಪಿಕೊಂಡು ಕೆಲಸ ಮಾಡುವೆ. ಆದರೆ

ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಿ ಎಂದು ಕಳೆದ ಡಿಸೆಂಬರ್(1 ವರ್ಷ ಹಿಂದೆ) ಶಿಫಾರಸು ಮಾಡಿದ್ದರೂ,ಇನ್ನೂ ಶಿಸ್ತುಕ್ರಮ ತೆಗೆದುಕೊಂಡಿಲ್ಲ.ಈ ವರ್ಗಾವಣೆ ನನ್ನನ್ನೂ ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ ಎಂದು ಅಸಮಧಾನ ಹೊರಹಾಕಿದ್ದಾರೆ

Share This Article
Leave a comment