ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ವಾಟರ್ ಡಿಸ್ಪೆನ್ಸರ್ ಕೊಡುಗೆ

Team Newsnap
1 Min Read

ಬನ್ನೂರಿನ ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ವಾಟರ್ ಡಿಸ್ಪೆನ್ಸರ್ ಯಂತ್ರವನ್ನು ಕೊಡುಗೆ ನೀಡಿದ್ದಾರೆ..

ಕೋವಿಡ್ -19 ಪರಿಸ್ಥಿತಿಯ ಮಧ್ಯೆ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಶ್ರಮವನ್ನು ಪರಿಗಣಿಸಿ ಮತ್ತು ಪ್ರೆಸ್ ಕ್ಲಬ್‌ನಲ್ಲಿ ತ್ವರಿತ ಬಿಸಿ ನೀರಿನ ಸೌಲಭ್ಯ ಒದಗಿಸಲು , ಸಮಾಜ ಸೇವಕ ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ( ಕಾಳಪ್ಪ ) ವಾಟರ್ ಡಿಸ್ಪೆನ್ಸರ್ ಒಂದನ್ನು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಅರ್ಪಿಸಿದರು.

ಪತ್ರಕರ್ತರು ವೈರಸ್‌ಗೆ ಹೆಚ್ಚು ಗುರಿಯಾಗುವ ಸಾಧ್ಯತೆ ಯನ್ನು ಮನಗಂಡು ಈ ಆಧುನಿಕ ಬಿಸಿ ಮತ್ತು ತಣ್ಣೀರು ಬರುವ ಮಿಷನ್ ಅನ್ನು ನೀಡಲಾಯಿತು.

ಇದೆ ಸಂಧರ್ಭದಲ್ಲಿ
ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ರವಿ ಕುಮಾರ್, ಕಾಳಪ್ಪರವರ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ ಅವರಿಗೆ ಧನ್ಯವಾದ ಅರ್ಪಿಸಿದರು .

Share This Article
Leave a comment