ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಬೀಡಿ ಕಾಲೋನಿಯಲ್ಲಿ 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಅವಾಂತರಸೃಷ್ಠಿದೆ.
ಬಡಾವಣೆಯ ಜನರು ರಾತ್ರಿ ನಿದ್ರೆ ಇಲ್ಲದೇ ಮನೆಗೆ ನುಗ್ಗಿದ್ದ ನೀರನ್ನು ಹೊರಗೆ ಹಾಕಿದ್ದಾರೆ. ಬೀಡಿ ಕಾಲೋನಿ ನಿರ್ಮಾಣವಾಗಿರುವ ಜಾಗ ಈ ಹಿಂದೆ ಕೆರೆಯಾಗಿದ್ದು, ಸರ್ಕಾರ ಕೆರೆಯನ್ನು ಮುಚ್ಚಿ ಇಲ್ಲಿ ಕಾಲೋನಿಯನ್ನು ನಿರ್ಮಾಣ ಮಾಡಿತ್ತು.
ಮೂಲಭೂತ ಸೌಕರ್ಯಗಳನ್ನು ಮಾತ್ರ ಸರಿಯಾಗಿ ಒದಗಿಸಿಲ್ಲ. ಸರಿಯಾದ ಒಳ ಚರಂಡಿ ಇಲ್ಲದ ಕಾರಣ ಈ ಬಡಾವಣೆಯ ಮನೆಗಳಿಗೆ ಪ್ರತಿ ಬಾರಿ ಮಳೆ ಬಂದಂತಹ ಸಂದರ್ಭದಲ್ಲಿ ಮಳೆಯ ನೀರು ನುಗ್ಗುತ್ತಿದೆ.