ಟಿಪ್ಪು ಎಕ್ಸ್ ಪ್ರೆಸ್ ಹೆಸರಿಗೆ ಕತ್ತರಿ : ಒಡೆಯರ್ ಎಕ್ಸ್ ಪ್ರೆಸ್ ನಾಮಕರಣ : ಮೈಸೂರು – ತಾಳಗುಪ್ಪಾ ರೈಲಿಗೆ ಕುವೆಂಪು ಎಕ್ಸ್ ಪ್ರೆಸ್ ನಾಮಕರಣ

Team Newsnap
1 Min Read
Tipu Express is renamed as Wodeyar Express & Talaguppa Express is named as Kuvempu express ಟಿಪ್ಪು ಎಕ್ಸ್ ಪ್ರೆಸ್ ಹೆಸರಿಗೆ ಕತ್ತರಿ : ಒಡೆಯರ್ ಎಕ್ಸ್ ಪ್ರೆಸ್ ನಾಮಕರಣ : ಮೈಸೂರು - ತಾಳಗುಪ್ಪಾ ರೈಲಿಗೆ ಕುವೆಂಪು ಎಕ್ಸ್ ಪ್ರೆಸ್ ನಾಮಕರಣ

ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರ ಟಿಪ್ಪು ಎಕ್ಸ್​ಪ್ರೆಸ್ ಬದಲಾಗಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ಎಂದು ನಾಮಕರಣ ಮಾಡಿದೆ.

ಹಲವು ದಿನಗಳಿಂದ ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸಿ ಎಂಬ ಒತ್ತಾಯ ಕೇಳಿ ಬಂದಿತ್ತು. ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ‌ ವೈಷ್ಣವ್‌ಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದರು. ದೆಹಲಿಯಲ್ಲಿ ಭೇಟಿಯಾಗಿ ಸಂಸದರು ಲಿಖಿತ ಮನವಿ ಕೂಡ ಸಲ್ಲಿಸಿದ್ದರು.ಇದನ್ನು ಓದಿ –ಪತ್ರಕರ್ತ ರಾಮುಮುದಿಗೌಡರ ಕುಟುಂಬಕ್ಕೆ 3 ಲಕ್ಷ ರು ಪರಿಹಾರ ನೀಡಿದ ಸಿಎಂ

ಮೈಸೂರಿಗೆ ರೈಲು ಸೇವೆ ಕಲ್ಪಿಸುವಲ್ಲಿ ಮಹಾರಾಜರ ಕೊಡುಗೆ ಅಪಾರ. ಹೀಗಾಗಿ ಒಡೆಯರ್ ಎಕ್ಸ್‌ಪ್ರೆಸ್‌ ಎಂದು ಹೆಸರಿಡಬೇಕು ಎಂದು ಒತ್ತಾಯಿಸಿದ್ದರು.

ರಾಜ ವಂಶಸ್ಥ ಯದುವೀರ್​ ಒಡೆಯರ್, ಟಿಪ್ಪು ಎಕ್ಸ್​ಪ್ರೆಸ್​ ರೈಲ್ವೆ ಮರು ನಾಮಕರಣದ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆ ಮಾಡಿ ಒಡೆಯರ್​ ಹೆಸರಿಟ್ಟರೆ ಒಳ್ಳೆಯದು. ಆದರೆ ಹೆಸರು ಬದಲಾವಣೆ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಷಯ, ಒಡೆಯರ್​ ಎಂದಿದ್ದರು.

ಸಂಸದರೇ ಒಡೆಯರ್​ ಹೆಸರಿನಲ್ಲಿ ಟ್ರೈನ್​ ಬರಬೇಕು ಎಂದಿದ್ದಾರೆ. ಇದು ಸರ್ಕಾರದ ಇಚ್ಛೆ ಆದರೇ ಇದಕ್ಕೆ ಜನಸಾಮಾನ್ಯರ ಬೆಂಬಲವೂ ಬೇಕು. ಆಗಿನ ಕಾಲದಲ್ಲಿಯೇ ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್​, ಹತ್ತನೇ ಕೃಷ್ಣರಾಜ ಒಡೆಯರ್​ ರೈಲ್ವೆ ಸೇವೆಗೆ ಎಷ್ಟೆಲ್ಲಾ ಆದ್ಯತೆ ನೀಡಿದ್ದಾರೆ ಎಂಬುದರ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಿರುವಾಗ ಒಡೆಯರ್​ ಎಂದು ಮರು ನಾಮಕರಣ ಮಾಡುವುದು ಒಳ್ಳೆಯದು ಎಂದು ಯದುವೀರ್​​​ ಈ ಹಿಂದೆಯೇ ಅಭಿಪ್ರಾಯಪಟ್ಟಿದ್ದರು.

ಕುವೆಂಪು ಎಕ್ಸ್ ಪ್ರೆಸ್ ನಾಮಕರಣ :


ಮೈಸೂರು – ತಾಳಗುಪ್ಪಾ ಎಕ್ಸ್ ಪ್ರೆಸ್ ರೈಲಿಗೆ ಕುವೆಂಪು ಎಕ್ಸ್ ಪ್ರೆಸ್ ಎಂದು ಮರು ನಾಮಕರಣ ಮಾಡಿ ಕೇಂದ್ರ ಆದೇಶ ಹೊರಡಿಸಿದೆ

WhatsApp Image 2022 10 07 at 8.31.00 PM

Share This Article
Leave a comment