ನನ್ನ, DK ಶಿವಕುಮಾರ್​​ ನಡುವೆ ಯಾವುದೇ ಭಿನ್ನಾಭಿಪ್ರಾಯ , ಬಿರುಕಿಲ್ಲ- ಸಿದ್ದರಾಮಯ್ಯ

Team Newsnap
1 Min Read
Siddaramaiah will help me : Confidence to become CM - DK Shi ಸಿದ್ದರಾಮಯ್ಯ ನನಗೆ ಸಹಕಾರ ಕೊಡುತ್ತಾರೆ : ಸಿಎಂ ಆಗುವ ವಿಶ್ವಾಸ - ಡಿ ಕೆ ಶಿ

ನನ್ನ, DK ಶಿವಕುಮಾರ್​​ ನಡುವೆ ಯಾವುದೇ ಭಿನ್ನಾಭಿಪ್ರಾಯ ,ಬಿರುಕಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸ್ಪಷ್ಟಪಡಿಸಿದರು

ದಾವಣಗೆರೆಯಲ್ಲಿ ತಮ್ಮ 75ನೇ ಹುಟ್ಟುಹಬ್ಬದ ಅಂವಾಗಿ ನಡೆದ ಸಿದ್ದರಾಮೋತ್ಸವ ಸಮಾವೇಶದಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, 2022 ಆಗಸ್ಟ್​​ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಲಿವೆ. ಹೀಗಾಗಿ ನಾವು ಇಡೀ ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ನನಗೂ ಇಂದಿಗೆ ಕಾಕತಾಳೀಯ ಎಂಬಂತೆ 75 ವರ್ಷಗಳು ಆಗಿದೆ. ನಾನು ಎಂದೂ ಬರ್ತ್​ಡೇ ಮಾಡಿಕೊಂಡಿಲ್ಲ. ಇದಕ್ಕೆ ಕಾರಣ ನನ್ನ ಪಕ್ಷದ ಸ್ನೇಹಿತರು. ಎಲ್ಲರ ಒತ್ತಡಕ್ಕೆ ಮಣಿದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದೇನೆ ಎಂದರು.ಇದನ್ನು ಓದಿ –ಲಿಂಗಧೀಕ್ಷೆ ಪಡೆದ ರಾಹುಲ್ ಗಾಂಧಿ, ಮುರುಘಾ ಮಠದಲ್ಲಿ ಧ್ಯಾನ

ಇಂದಿನ ಕಾರ್ಯಕ್ರಮ ಯಶಸ್ವಿಯಾಗಲು ರಾಹುಲ್​ ಗಾಂಧಿಯವರೇ ಕಾರಣ. ಆಗಲೇ ಅವರೇ ನನಗೆ ಯಾರ ಬರ್ತ್​ಡೇ ಹೋಗೋದಿಲ್ಲ, ಸಿದ್ದರಾಮಯ್ಯ ಅಂದ್ರೆ ನನಗೆ ವಿಶೇಷ ಪ್ರೀತಿ. ಹಾಗಾಗಿ ಬಂದಿದ್ದೇನೆ ಎಂದಿದ್ದಾರೆ. ಅದಕ್ಕೆ ಕೋಟಿ ನಮನಗಳು ಎಂದರು.

ನನ್ನ ಮತ್ತು ಡಿ.ಕೆ ಶಿವಕುಮಾರ್​ ನಡುವೆ ಯಾವುದೇ ಭಿನ್ನಾಭಿಪ್ರಾಯ, ಬಿರುಕು ಇಲ್ಲ. ನಮ್ಮಿಬ್ಬರ ನಡುವೆ ಏನೋ ನಡೀತಿದೆ ಎಂಬುದು ಬಿಜೆಪಿಯವರು ಸೃಷ್ಟಿಸಿರುವ ಸುಳ್ಳು. ನಾವು ಚೆನ್ನಾಗಿಯೇ ಇದ್ದೇವೆ, ಒಟ್ಟಾಗಿ ಎಲೆಕ್ಷನ್​​ನಲ್ಲಿ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದರು.

Share This Article
Leave a comment