ಮೊಬೈಲ್ ಕಂಪನಿಯ ಮೇಲೆ ಕಲ್ಲು ತೂರಾಟ : ಗಾಜು ಪುಡಿ ಪುಡಿ ಮಾಡಿದ ಕಾರ್ಮಿಕರು

Team Newsnap
0 Min Read

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಟ್ರಾನ್ ಮೊಬೈಲ್ ಕಂಪನಿಯ ಕಚೇರಿ ಮೇಲೆ ಕಾರ್ಮಿಕರು ಕಲ್ಲು ತೂರಾಟ ನಡೆಸಿ ಗಾಜು ಪುಡಿ ಪುಡಿ ಮಾಡಿದ ಘಟನೆ ಜರುಗಿದೆ.

12 ತಾಸುಗಳ ಕಾಲ ದುಡಿಸಿ ಕೊಳ್ಳುವ ಕಂಪನಿಯು ಹೆಚ್ಚುವರಿ 10 ಸಾವಿರ ರು ಹಣ ನೀಡದ ಕಾರಣ ಪುರುಷ ಹಾಗೂ ಮಹಿಳಾ ಕಾರ್ಮಿಕರು ಭಾರಿ ಗಲಾಟೆ ಮಾಡಿ. ಕಚೇರಿ ಧ್ವಂಸಗೊಳಿಸಿದರು.‌

ಈ ಮೊಬೈಲ್ ಕಂಪನಿಯು ಐಪೋನ್ ಬಿಡಿ ಭಾಗಗಳನ್ನು ತಯಾರು ಮಾಡಿಕೊಡುತ್ತದೆ. ಕಾರ್ಮಿಕರ ಈ ದಾಳಿಯಿಂದಾಗಿ ಅಪಾರ ನಷ್ಟ ಉಂಟಾಗಿದೆ.

Share This Article
Leave a comment