ಚನ್ನವೀರ ಕಣಿವಿ ನೆನೆದು ಕವಿ ಕಾವ್ಯ ನಮನ “ಕಣವಿ – ಕಾವ್ಯ ಕಸುಬಿ”
ಚೆಂಬೆಳಕಿನ ಹೊಂಬಿಸಿಲಿನ
ಮೆಲುನುಡಿಯ ಕಣಜ
ನುಡಿಭಕ್ತಿಯ ನಾಡಪ್ರೇಮದ
ಹೊಂಬೆಳಕದು ಸಹಜ
ವಿದ್ಯಾದಿಚೇತನ ಆತ್ಮವಿಕಾಸಿ
ಅಪ್ರತಿಮ ಹೃದಯ ಸಂಸ್ಕಾರಿ
ಸಮನ್ವಯ ಜೀವಧ್ವನಿಯ
ಕರುನಾಡಿನ ಭಾವ ಸಂಚಾರಿ
ಹೊರಳಿದ್ದು ನಡೆ ನುಡಿ
ಬೆಳಗಿ ಬೆಳಕಾಗಿಪ ಸೂರ್ಯನೆಡೆಗೆ
ಅರಳಿದ್ದು ನಾಸಿಕವ ಹಿಗ್ಗಿಸುವ
ಪರಿಮಳದ ಸಗ್ಗದೆಡೆಗೆ
ಲೆಕ್ಕಣಿ ತುಂಬೆಲ್ಲ ಮುತ್ತಿನಾಭರಣ
ಬರೆದದ್ದೆಲ್ಲ ಶಿಲ್ಪಕಲಾಕೃತಿ
ಅವ ಜೀವಂತ ಗತಿ
ನೆತ್ತರಿನ ಕೊಡುಗೆಯ ಸ್ಮೃತಿ
ಇನಿದನಿಯ ಜೇನ ಸುರಿಸಿದ
ಶಾಂತಿಯ ರೂಪ
ಗಗನದಿ ಸಾಗಿದ ಬಾಗಿದ ಮೋಡದ
ಸ್ನಿಗ್ಧತೆಯ ಭೂಪ
ವಿಶ್ವಭಾರತಿಗೆ ಕನ್ನಡದಾರತಿ
ಬೆಳಗಿದ ಭಾಗ್ಯದ ಕಾವ್ಯಾಕ್ಷಿ
ದಯೆ ಧರ್ಮಗಳ ಮೂಲ ತರಂಗ
ನುಡಿಸಿದ ನೀನೀಗ ಆಕಾಶಬುಟ್ಟಿ
ಕಿನ್ನರಿ ಲೋಕದ ಮಧು ಭಾವಜೀವಿ
ಬೆರಳು ನುಡಿಯಲು ನೀ ಕಾವ್ಯ ಕಸುಬಿ
ನೆಲಮುಗಿಲಿಗೆ ದಾರಿದೀಪದ ಬಣವಿ
ಕುಸುರಿಯ ಚಿರಂತನ ದಾಹದ ನೀ ಕಣವಿ

- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ