ಬೂದನೂರು ಗ್ರಾಮ ಸಭೆಗೆ ಅಧಿಕಾರಿಗಳೇ ಗೈರು – ತೀವ್ರ ಆಕ್ಷೇಪ

Team Newsnap
1 Min Read

ಗ್ರಾಮಸಭೆಯಲ್ಲಿ ತಮ್ಮ ಇಲಾಖಾ ಮಾಹಿತಿ ನೀಡಬೇಕಾದ ಅಧಿಕಾರಿಗಳೇ ಗೈರು ಹಾಜರಾದ ಹಿನ್ನಲೆಯಲ್ಲಿ ಸಭೆ ರದ್ದಾದ ಘಟನೆ ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯಲ್ಲಿ ಇಂದು ಜರುಗಿದೆ.

ಅಧ್ಯಕ್ಷ ರವಿ ಅವರ ಅಧ್ಯಕ್ಷತೆಯಲ್ಲಿ ಅರಂಭವಾದ ಸಭೆಗೆ ಅರಣ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧಿಕಾರಿ ಹೊರತುಪಡಿಸಿ ಯಾವುದೇ ಇಲಾಖೆ ಅಧಿಕಾರಿಗಳು ಭಾಗವಹಿಸದಿರುವುದಕ್ಕೆ ತೀವ್ರ ಅಕ್ಷೇಪ ವ್ಯಕ್ತವಾಯಿತು.

ಅಲ್ಲದೆ ಇಲಾಖಾ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡದಿರುವುದಕ್ಕೆ ಸಭೆ ತೀವ್ರ ತರಾಟೆಗೆ ತೆಗೆದುಕೊಂಡಿತು.

ಸಭೆಗೆ ನಿರೀಕ್ಷಿತ ಗ್ರಾಮಸ್ಥರ ಹಾಜರಿ ಕೊರತೆಯೂ ಎದುರಾಗಿ, ಅಧ್ಯಕ್ಷರು ಗಂಟೆ ಸಭೆ ಅರಂಭಿಸಿ ಅರ್ಧ ಗಂಟೆ ಕಾಯ್ದರಾದರೂ ಜನ ಹಾಜರಿಯೂ ಸಿಗಲಿಲ್ಲ.

ದುರಂತವೆಂದರೆ ಅಡಳಿತ ಮಂಡಳಿಯ 18 ಸದಸ್ಯರ ಪೈಕಿ ಅರ್ಧದಷ್ಟು ಸದಸ್ಯರ ಗೈರಾಗಿದ್ದರು.

ಕಡೆಗೆ ಅಧ್ಯಕ್ಷರು ಸಭೆಯನ್ನು ಶುಕ್ರವಾರಕ್ಕೆ ಮುಂದೂಡಿದರು.
ಸಭೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್, ಕಾರ್ಯದರ್ಶಿ ವಿನಯ್ ಗೌಡ, ಸದಸ್ಯರಾದ ಹೆಚ್.ಎಸ್.ಮಧು, ಅರುಣ್ ಕುಮಾರ್, ಬಿ.ಎಸ್.ಪೂರ್ಣಿಮಾ ಮೊದಲಾದವರಿದ್ದರು.

Share This Article
Leave a comment