ಹೆಚ್ ಡಿ ಕೋಟೆ :
ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಣೆ ಮಾಡಲು ಹೋದ ಅಪ್ಪ – ಅಮ್ಮನೂ ಸಹ ದುರಂತ ಸಾವು ಕಂಡ ಘಟನೆ ಹೆಚ್ ಡಿ ಕೋಟೆ ತಾಲೂಕು ಚಂಗೌಡನಹಳ್ಳಿ ಬಳಿ ಜರುಗಿದೆ.
ಶಾಹಿರಾ ಬಾನು (20) ತಂದೆ ಮೊಹಮ್ಮದ್ ಕಪೀಲ್ , ತಾಯಿ ಶಹಾರಿ ಬಾನು ಸಾವನ್ನಪ್ಪಿದವರು.
ಮೃತರೆಲ್ಲರೂ ಬೆಂಗಳೂರಿನ ಜಯನಗರದವರು. ಅಜ್ಜಿ ತಿಥಿ ಕಾರ್ಯ ಮುಗಿಸಿ ನಾಲೆಗೆ ಕೈ – ಕಾಲು ತೊಳೆದುಕೊಂಡು ಬರಲು ಮಗಳು ಹೋಗಿದ್ದಾಳೆ. ಆಗ ಆಕೆ ಕಾಲು ಜಾರಿ ಬಿದ್ದಿದ್ದಾಳೆ. ಅವಳನ್ನು ರಕ್ಷಣೆ ಮಾಡಲು ಹೋದ ಅಪ್ಪ – ಅಮ್ಮ ಕೂಡ ಜಲಸಮಾಧಿಯಾಗಿದ್ದಾರೆ.
ನುಗು ಜಲಾಶಯದ ಬಲ ದಂಡೆ ನಾಲೆಯಲ್ಲಿ ಈ ಘಟನೆ ಜರುಗಿದೆ. ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು
ತನಿಖೆ ನಡೆಸುತ್ತಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು