2023ರ ಚುನಾವಣೆಯೇ ನನ್ನ ಕೊನೆಯ ಹೋರಾಟ ಎಂದಿದ್ದಾರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ .
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿನಾನು ಮುಂದಿನ ಚುನಾವಣೆಯಲ್ಲಿಯೂಹೋರಾಟ ಮಾಡುತ್ತೇನೆ. ನಾನು ಅಧಿಕಾರ ಅನುಭವಿಸಲು ಮುಖ್ಯಮಂತ್ರಿ ಆಗಲು ಅಲ್ಲ. ಜನರ ಕಷ್ಟಗಳನ್ನು ಬಗೆಹರಿಸಲು ಹೋರಾಟ ಮಾಡುತ್ತೇನೆ ಎಂದರು.
ನನ್ನ ಐದು ಯೋಜನೆ ಮೂಲಕ ಜನರ ಕಷ್ಟಗಳನ್ನು ಬಗೆಹರಿಸುತ್ತೇನೆ. ನನಗೆ ಮುಂದಿನ ಬಾರಿ ಸ್ವಂತ್ರವಾಗಿ ಅಧಿಕಾರ ಬರಲು ಶಕ್ತಿ ಕೊಡಿ ಎಂದು ಹೆಚ್ಡಿಕೆ ಕೋರಿದರು.
ಇದೇ ವೇಳೆ ಶಾಸಕ ಜಿಟಿ ದೇವೇಗೌಡರ ಕಾಲೆಳೆದ ಹೆಚ್. ಡಿ. ಕೆ ನಾನಾಗಲಿ ದೇವೇಗೌಡರಾಗಲಿ ಯಾರೂಅನ್ಯಾಯ ಮಾಡಿಲ್ಲ. ದೇವೇಗೌಡರು ಎಂದ್ರೆ ಈ ಚಿಕ್ಕ ದೇವೇಗೌಡರು ಅಲ್ಲ, ದೊಡ್ಡದೇವೇಗೌಡರು ಎಂದು ವ್ಯಂಗ್ಯವಾಡಿದರು.
ನಮ್ಮ ಪಕ್ಷದಲ್ಲಿ ಇದ್ದು ಬೆಳೆದು ಈಗ ಪಕ್ಷ ಸರ್ವನಾಶ ಆಗುತ್ತಾರೆ ಎನ್ನುತ್ತಾರೆ. ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಕಿಡಿಕಾರಿದ್ದಾರೆ.