ಕನ್ನಡದ ಮಣ್ಣೆನಗೆ
ಹೊನ್ನ ಹೋಲುತಲಿಹುದು,
ಕನ್ನಡದ ಮರಗಳಿದು
ರೇಷಿಮೆಯ ದಿರಿಸು!
ಕನ್ನಡದ ಹೂವುಗಳು
ಸುರಹೊನ್ನೆಯಂತಿಹುದು,
ಕನ್ನಡದ ಜಲವೆನಗೆ
ಅಮೃತಕ್ಕೂ ಮಿಗಿಲು!
ಕನ್ನಡದ ಗಾಳಿಯದು
ಚಂದನವ ಸೂಸಿಹುದು,
ಕನ್ನಡದ ಪಶು ಪಕ್ಷಿ
ಕಂಗಳಿಗೆ ಸೊಗಸು !
ಕನ್ನಡದ ನುಡಿಗಳಿಗೆ
ವಜ್ರಕಿಂತಲೂ ಬೆಲೆಯು,
ಕನ್ನಡಮ್ಮನ ಮಡಿಲೆನಗೆ
ಸ್ವರ್ಗ ಸಮಾನವು!
ಕಲೆ, ಸಾಹಿತ್ಯದ ಬೆಲೆ,
ಭವ್ಯ ಸಂಸ್ಕೃತಿ ಸೆಲೆ,
ನೃತ್ಯ, ಸಂಗೀತವು ನೆಲೆ
ಮಾಡಿರುವ ನಾಡಿದು!
ಸಹಿಷ್ಣುತೆಯೊಂದಿಗೆ
ಸ್ವಾಭಿಮಾನವೂ ಬೆರೆತು,
ನವೋನ್ನತಿಯ ಬೀಡಾಗಿ
ನಲಿಯುತಿಹ ನಾಡಿದು!
ಅಂದದಾ ಈ ನಾಡನು
ಹೆಮ್ಮೆಯಾ ಈ ಬೀಡನು
ಉಳಿಸಿ ಬೆಳೆಸುವ ಪಣವ
ತೊಡ ಬೇಕಿದೆ ನಾವಿಂದು!!
–. ಶ್ರೀವಲ್ಲಿ ಮಂಜುನಾಥ
- ರಾಹುಲ್ ಗಾಂಧಿ ‘ಪ್ರಧಾನಿಯಾಗಲು’ ಮೋದಿಗಿಂತ ಸಮರ್ಥರು : CM ಸಿದ್ದರಾಮಯ್ಯ
- 22 ಕೆಜಿ ಚಿನ್ನ, 6 ಕೋಟಿ ಮೌಲ್ಯದ ವಜ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಜಪ್ತಿ
- ಇಂದು ಕೆ.ಪಿ. ನಂಜುಂಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
- ರಾಜಕೀಯ ಸ್ವಾರ್ಥಕ್ಕಾಗಿ ನೆರೆ ರಾಜ್ಯಕ್ಕೆ ಕಾವೇರಿ ನೀರು ಮಾರಿಕೊಂಡ ಕಾಂಗ್ರೆಸ್!
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ