MLC ಚುನಾವಣೆ : ಸುಮಲತಾ, ಕಾಂಗ್ರೆಸ್​​ಗೆ ಸೋಲಿನ ಸೇಡು ತೀರಿಸಲು ಜೆಡಿಎಸ್ ದಳಪತಿ ಸಜ್ಜು

Team Newsnap
1 Min Read

ವಿಧಾನ ಪರಿಷತ್​​ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಜೆಡಿಎಸ್ ನ ದಳಪತಿಗಳು ಮಂಡ್ಯ ಹಾಗೂ ತುಮಕೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಸಂಸದೆ ಸುಮಲತಾಗೆ ಪಾಠ ಕಲಿಸಲು ಲೆಕ್ಕಾಚಾರ ಹಾಕಿದ್ದಾರೆ.

ಈ ಎರಡು ಕ್ಷೇತ್ರಗಳನ್ನು ಸವಾಲಾಗಿ ತೆಗೆದುಕೊಂಡಿರುವ ದಳಪತಿಗಳು ಸೋಲಿನ ಸೇಡು ತೀರಿಸಿಕೊಳ್ಳಲು ಎರಡು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರಂತೆ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ.

ಅವಮಾನವಾಗಿರುವ ಕ್ಷೇತ್ರಗಳಲ್ಲೇ ಪಾಠ ಕಲಿಸಲು ಹೊರಟಿರುವ ದಳಪತಿಗಳು, ತುಮಕೂರು ಹಾಗೂ ಮಂಡ್ಯದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ.

ಮಂಡ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳಲು ಹಠಕ್ಕೆ ಬಿದ್ದಿರುವ ದಳಪತಿಗಳು, ತಮ್ಮ ರಾಜಕೀಯ ಕಡುವೈರಿ ಸಂಸದೆ ಸುಮಲತಾ ವಿರುದ್ಧ ಗೆದ್ದು ತೋರಿಸಲು ಮುಂದಾಗಿದ್ದಾರೆ.

ನಿಖಿಲ್ ವಿರುದ್ಧ ಚಕ್ರವ್ಯೂಹ ರಚಿಸಿ ಸೋಲಿಸಿದ್ದವರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ ನಾಯಕರು. ಹಾಗಾಗಿ ಖುದ್ದು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನಿಖಿಲ್​​ಗೆ ವಹಿಸಿದ್ದಾರೆ.

ಈಗಾಗಲೇ ಮಂಡ್ಯದಲ್ಲಿ ಬೀಡುಬಿಟ್ಟು ನಿರಂತರ ಪ್ರಚಾರ ನಡೆಸುತ್ತಿದ್ದಾರೆ ನಿಖಿಲ್. ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ನಿರಂತರ ಪ್ರಚಾರ ಕೈಗೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಾದಂತೆ ಯಡವಟ್ಟಾಗಬಾರದೆಂದು ಜಿಲ್ಲೆಯ ಶಾಸಕರಿಗೆ ಸೂಚ‌ನೆಯನ್ನೂ ನೀಡಿದ್ದಾರೆ. ಇನ್ನು ತುಮಕೂರಿನಲ್ಲೂ ಸೋಲಿನ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಸೋಲಿಸಿರುವ ಬೇಗುದಿ ಇನ್ನು ಕಡಿಮೆಯಾಗಿಲ್ಲ. ಕುತಂತ್ರ ನಡೆಸಿ ಕೈನಾಯಕರು ಸೋಲಿಸಿದರೆಂದು ಕುದಿಯುತ್ತಿದ್ದಾರೆ. ಅದೇ ಕಾರಣಕ್ಕೆ ಈ ಬಾರಿ ಸೋಲಿನ ಅಪಮಾನಕ್ಕೆ ಉತ್ತರ ಕೊಡಲು ಮುಂದಾಗಿದ್ದಾರೆ. ಈ ಕ್ಷೇತ್ರದ ಖುದ್ದು ಉಸ್ತುವಾರಿ ಕುಮಾರಸ್ವಾಮಿ ವಹಿಸಿಕೊಂಡಿ
ದ್ದಾರೆ

Share This Article
Leave a comment