ಬಿಹಾರ ಮಾದರಿಯಲ್ಲೇ ನಂಜನಗೂಡು ಬಳಿ ಗ್ರಾಮದಲ್ಲಿ ಅಮಾನವೀಯ ಘಟನೆ ಜರುಗಿದೆ
ಯುವಕ – ಯುವತಿ ನಡುವೆ ಅನೈತಿಕ ಸಂಬಂಧದ ಶಂಕೆಯಿಂದ ಯುವಕ – ಯುವತಿಯನ್ನು ಒಂದೇ ಕಂಬಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು ಹಿಗ್ಗಾ ಮುಗ್ಗ ಥಳಿಸಿದ ಅಮಾನವೀಯ ಘಟನೆ ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಜರುಗಿದೆ.
ಯುವಕ – ಯುವತಿಗೆ ಎರಡು ದಿನಗಳ ಕಾಲ ಊಟ ತಿಂಡಿ ಕೊಡದೇ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ್ದರು ಎಂದ ಗೊತ್ತಾಗಿದೆ
ವಿಷಯದ ತಿಳಿದ ನಂಜಗೂಡು ವೃತ್ತನಿರೀಕ್ಷಕ ಲಕ್ಷ್ಮೀಕಾಂತ ತಳವಾರ ಗ್ರಾಮಕ್ಕೆ ಧಾವಿಸಿ ಯುವಕ – ಯುವತಿಯನ್ನು ರಕ್ಷಣೆ ಮಾಡಿದ್ದಾರೆ.