ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಗೆ ಬರೋಬ್ಬರಿ 3 ಲಕ್ಷ ಸಂಬಳ. ಪತ್ನಿ ಇಬ್ಬರು ಮಕ್ಕಳು ಸುಂದರ ಸಂಸಾರದಲ್ಲಿ ಕೈ ಕೊಟ್ಟಿದ್ದೇ ಹನಿಟ್ರ್ಯಾಪ್ ಜಾಲ.ರೈತರನ್ನು ಮದುವೆಯಾಗುವ ಯುವತಿಗೆ 10 ಲಕ್ಷ ರು. ಪ್ರೋತ್ಸಾಹ ಧನಕ್ಕೆ ಆಗ್ರಹ
ಆರಂಭದ ದಿನಗಳಲ್ಲಿ ಸ್ನೇಹಿತನ ಮೂಲಕ ಪರಿಚಯವಾದ ಮಾಯಂಗನೆ ನಿಧಾನವಾಗಿ ಇವರ ಸಲುಗೆ ಪಡೆದುಕೊಂಡು ಸೆಲ್ಫಿ ಫೋಟೋ ವೀಡಿಯೋ ತೆಗೆದುಕೊಳ್ಳುತ್ತಿದ್ದಳು. ಅನಾರೋಗ್ಯದ ಕಾರಣವೊಡ್ಡಿ, ಆಗಾಗ ದುಡ್ಡನ್ನು ಪಡೆದುಕೊಳ್ಳುತ್ತಿದ್ದಳು. ನಂತರ ನಿಧಾನವಾಗಿ ಹನಿಟ್ರ್ಯಾಪ್ ವ್ಯೂಹ ಹೆಣೆದು ಟೆಕ್ಕಿಯನ್ನು ಬಲೆಗೆ ಬೀಳಿಸಿದ್ದಳು.
ಮೊದಮೊದಲು ಅನಾರೋಗ್ಯದ ನೆಪದಲ್ಲಿ ದುಡ್ಡು ವಸೂಲಿ ಮಾಡಿದ ಆಕೆ ಬಳಿಕ ನೇರವಾಗಿ ಲಕ್ಷ ಲಕ್ಷ ಹಣ ಕೊಡುವಂತೆ ಧಮ್ಕಿ ಹಾಕಲು ಆರಂಭಿಸಿದಳು. ಹಣ ಕೊಡದಿದ್ದರೆ ಸೆಲ್ಫಿ, ವೀಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದಳು.
ಇಷ್ಟಕ್ಕೂ ಒಪ್ಪದಿದ್ದರೆ ಟೆಕ್ಕಿಯ ಪತ್ನಿಗೆ ಫೋಟೋ, ವೀಡಿಯೋ ಕಳಿಸುವ ಬೆದರಿಕೆ ಒಡ್ಡಿದಳು. 20 ಲಕ್ಷ ಹಣ ಕೊಟ್ಟ ಮೇಲೂ ಟಾರ್ಚರ್ ನಿಂತಿಲ್ಲ. ಇದರಿಂದ ಬೇಸತ್ತ ಟೆಕ್ಕಿ ಮತ್ತೆ ಹಣ ಕೊಡೋದಿಲ್ಲ ಎಂದಾಗ ಮಹಿಳೆಯಿಂದ ದೂರು ಕೊಡುವ ಬಗ್ಗೆ ಬ್ಲಾಕ್ಮೇಲ್ ಮಾಡಲಾಯಿತು. ಟೆಕ್ಕಿ ಕೆಲಸ ಮಾಡುವ ಕಂಪನಿಗೂ ಮೇಲ್ ಬರತೊಡಗಿತು.
ಬಳಿಕ ಟೆಕ್ಕಿಯನ್ನು ಕಂಪನಿ ಕೆಲಸದಿಂದ ವಜಾಗೊಳಿಸಿತು. ಮತ್ತೆ ಹಣ ಕೊಡಲು ಒಪ್ಪದಿದ್ದಾಗ ಪತ್ನಿಗೂ ಫೋಟೋ, ವೀಡಿಯೋ ರವಾನೆ ಮಾಡಿದ ನಂತರ ಟೆಕ್ಕಿ ಸಂಸಾರ ಬೀದಿಗೆ ಬಂತು. ಹೆಂಡತಿ ಬಿಟ್ಟು ಹೋದಳು.ಈಗ ಟೆಕ್ಕಿ ಹನಿಟ್ರ್ಯಾಪ್ ಮಯಾಂಗನೆ ವಿರುದ್ದ ಪೋಲಿಸರಿಗೆ ದೂರು ನೀಡಿದ್ದಾರೆ.
ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More
ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More
ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More
(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More
ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More
This website uses cookies.
Leave a Comment