ನಾ ಈಜು ಕೊಳದಲ್ಲಿ
ತೇಲುತಿದ್ದೆ
ಏನದು ಅಮ್ಮ!
ಈಜು ಕೊಳವಲ್ಲ
ಅದು ನನ್ನ ಗರ್ಭದ
ಜೀವಕೊಳ ಕಂದ !
ಹೊಕ್ಕಳಿಂದ ಬಳ್ಳಿಯೊಂದು
ಹೊರ ಬಂದಂತಿತ್ತು
ಏನದು ಅಮ್ಮ !
ಅದು ಬಳ್ಳಿಯಲ್ಲ
ತುತ್ತಿಡುವ ನನ್ನ
ಇನ್ನೊಂದು ಕೈ ಕಂದ !
ಹೊರಜಗತ್ತಿಗೆ ಬರುವಾಗ
ಆಕ್ರಂದನವ ಆಲಿಸಿದೆ
ಏನದು ಅಮ್ಮ!
ಆಕ್ರಂದನವಲ್ಲ ಅದು
ಬಚ್ಚಿಡದ ನನ್ನ ಸಡಗರದ
ಸಂಕೇತ ಕಂದ !
ನಿನ್ನ ಹೊಟ್ಟೆಯ
ಮೇಲೆ ಗೆರೆಗಳ ಕಂಡೆ
ಏನದು ಅಮ್ಮ!

ಗೆರೆಗಳಲ್ಲ ಅವು
ನೀ ಬರೆದ ಮೊದಲ
ಚಿತ್ತಾರ ಕಂದ !
ನಾ ಅತ್ತರೆ ಅಳುವೇ
ನಾ ನಕ್ಕರೆ ನಗುವೆ ಸೋಜಿಗ
ಏನದು ಅಮ್ಮ!
ಅಳಲು-ನಗಲು ನಿನ್ನ
ರೂಪದಾಕೃತಿಗೆ ನಾ ಉಸಿರಿನ
ಬಣ್ಣ ಬಳಿದವಳು ಕಂದ !
===============
ಡಾ. ರಾಜಶೇಖರ ನಾಗೂರ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್

- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ

- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು

- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ

- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ

- ಕಾಂಗ್ರೆಸ್ ಸಚಿವರಿಗೆ ರನ್ಯಾ ರಾವ್ ಕರೆ: ಶಾಸಕ ಭರತ್ ಶೆಟ್ಟಿಯಿಂದ ಗಂಭೀರ ಆರೋಪ




More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ