ಬಿಳಿಗಿರಿ ರಂಗನಾಥನ ದಶ೯ನ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್

Team Newsnap
0 Min Read

ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಗುರುವಾರ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ‌ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿದ್ದರು.

ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ವಡ್ಡಗೆರೆ ಹೆಲಿಪ್ಯಾಡ್​​ಗೆ ಆಗಮಿಸಿ, ರಸ್ತೆಯ ಮೂಲಕ ಬಿಳಿಗಿರಿರಂಗನ ಬೆಟ್ಟಕ್ಕೆ ಆಗಮಿಸಿದರು.

ಸುಮಾರು 15 ಕಿ.ಮೀ ರಸ್ತೆಯಲ್ಲಿ ಪ್ರಯಾಣ ನಡೆಸಿದ ಆಗಮಿಸಿದ ರಾಮನಾಥ್​ ಕೋವಿಂದ್ ಅವರನ್ನು ಚಾಮರಾಜನಗರ ಜಿಲ್ಲಾಡಳಿತ ಬರಮಾಡಿಕೊಂಡರು.

ಆ ಬಳಿಕ ಬಿಳಿಗಿರಿರಂಗನನಾಥನಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಶೇಷ ಪೂಜೆ ಸಲ್ಲಿಸಿದರು.

ರಾಷ್ಟ್ರಪತಿಗಳ ಆಗಮನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯ ಸುತ್ತಲು ನಿಷೇದಾಜ್ಞೆ ಜಾರಿ ಮಾಡಿ ದೇವಾಲಯದಲ್ಲಿ ಅರ್ಚಕರಿಗೆ ಮಾತ್ರ ಪ್ರವೇಶ ಕಲ್ಪಿಸಿ ಸಾರ್ವಜನಿಕ ಪ್ರವೇಶಕ್ಕೂ ನಿಷೇದಾಜ್ಞೆ ವಿಧಿಸಲಾಗಿತ್ತು.

Share This Article
Leave a comment