ವ್ಯಾಕ್ಸಿನೇಷನ್‌ ಬಗ್ಗೆ ಅಸಡ್ಡೆ ತೋರಿದ್ದ ಸರ್ಕಾರಿ ವೈದ್ಯ ಕೊರೋನಾ ಗೆ ಬಲಿ

Team Newsnap
1 Min Read

ಕೋವಿಡ್ ಬಂದರೂ ನಾನು ಜಯಿಸುತ್ತೇನೆಂದು ಎಂದು ಸವಾಲು ಹಾಕಿ, ಸರ್ಕಾರಿ ಆದೇಶ ಧಿಕ್ಕರಿಸಿ, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ ತೋರಿದ್ದ ಸರ್ಕಾರಿ ವೈದ್ಯ ಕೊರೊನಾಗೆ ಬಲಿಯಾಗಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಕೊರೊನಾಗೆ ಸರ್ಕಾರಿ ವೈದ್ಯನ ಮೊದಲ ಬಲಿಯಾಗಿದೆ.

ಊರ್ಡಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮಂಜುನಾಥ್ (45) ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

ಕಳೆದ ವಾರದ ಕೊರೋನಾ ಪಾಸಿಟಿವ್ ಬಂದಿತ್ತು. ತುಮಕೂರು ನಗರದ ಆದರ್ಶ ಆಸ್ಪತ್ರೆಯಲ್ಲಿ ನಾಲ್ಕು ದಿನ ಚಿಕಿತ್ಸೆ ಪಡೆದಿದ್ದರೂ, ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ಮೂರು ದಿನದ ಹಿಂದೆ ಸಿದ್ದಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಮೊದಲೇ ಬಿಪಿ, ಶುಗರ್ ನಿಂದ ಬಳಲುತಿದ್ದ ಡಾ.ಮಂಜುನಾಥ್ ಗೆ ಕೋವಿಡ್ ಇನ್ನಷ್ಟು ಸಂಕಷ್ಟ ತಂದೊಡ್ಡಿ ಆರೋಗ್ಯ ಬಿಗಡಾಯಿಸಿತು. ಪರಿಣಾಮ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಡಾ.ಮಂಜುನಾಥ್ ಅವಿವಾಹಿತರು, ಇವರಿಗೆ ವ್ಯಾಕ್ಸಿನ್ ಬಗ್ಗೆ ನಂಬಿಕೆ ಇರಲಿಲ್ಲ. ಕೋವಿಡ್ ಬಂದರೂ ನಾನು ಜಯಿಸುತ್ತೇನೆ ಎನ್ನುತಿದ್ದರು. ಕೊನೆಗೆ ಕೊರೋನಾಗೆ ಬಲಿಯಾದರು.

Share This Article
Leave a comment