ಮತ್ತೊಬ್ಬ ಕಿಂಗ್​​​ಪಿನ್​ ಕಾಶೀನಾಥ್ CID ಅಧಿಕಾರಿಗಳ ಎದುರು ಶರಣು: ಇಬ್ಬರು ಡಿವೈಎಸ್ಪಿ , ಇನ್ಸ್ ಪೆಕ್ಟರ್ಸ್ ಗಳೂ ಭಾಗಿ

Team Newsnap
1 Min Read

545 ಪಿಎಸ್​​ಐ ಪರೀಕ್ಷಾ ಅಕ್ರಮದ ಮತ್ತೊಬ್ಬ ಕಿಂಗ್‍ಪಿನ್ ಆರೋಪಿ ಕಾಶಿನಾಥ್ ಇಂದು ಬೆಳಿಗ್ಗೆ ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದಾನೆ.

ಈ ನಡುವೆ PSI ನೇಮಕಾತಿ ಹಗರಣದಲ್ಲಿ ಇಬ್ಬರು DYSP ಹಾಗೂ ಇನ್ಸ್ ಪೆಕ್ಟರ್ ಗಳೂ ಭಾಗಿಯಾಗಿದ್ದರೆಂಬ ಅಂಶ ಬೆಳಕಿಗೆಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ

ಕಾಶೀನಾಥ್ ಶರಣು ಹೇಗೆ ?

ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಕಲಬುರಗಿಯ ಸಿಐಡಿ ಕಚೇರಿ ಆಗಮಿಸಿದ ಕಾಶಿನಾಥ್ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯನೂ ಹೌದು

ಕಾಶಿನಾಥ್ ಮಾರ್ಗದರ್ಶನದಲ್ಲಿಯೇ ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪವಿದ್ದು, ಜ್ಞಾನ ಜ್ಯೋತಿ ಪರೀಕ್ಷೆ ಕೇಂದ್ರದಲ್ಲಿ ಓಎಂಆರ್ ತಿದ್ದುಪಡಿ ಹಾಗೂ ಬ್ಲೂ ಟೂತ್ ಬಳಕೆ ಮಾಡುವ ಮೂಲಕ ಅಕ್ರಮ ನಡೆಸಲಾಗಿತ್ತು.

ಇದನ್ನು ಓದಿ : PSI ಹಗರಣ: ಕಿಂಗ್​​ಪಿನ್ ಮಂಜುನಾಥ್‌ ಮೇಳಕುಂದಿ CIDಗೆ ಶರಣು

ಪ್ರಕರಣದಲ್ಲಿ ಎಫ್​ಐಆರ್ ದಾಖಲಾಗುತ್ತಿದಂತೆ ಪರಾರಿಯಾಗಿದ್ದ ಕಾಶಿನಾಥ್ ಕಳೆದ 22 ದಿನಗಳಿಂದ ತಲೆ ಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು.

ಸದ್ಯ ಆರೋಪಿ ಶರಣಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಅಕ್ರಮದಲ್ಲಿ ಬಂಧನವಾಗಿರುವ ಸಂಖ್ಯೆ 26ಕ್ಕೇರಿದೆ.

Share This Article
Leave a comment