545 ಪಿಎಸ್ಐ ಪರೀಕ್ಷಾ ಅಕ್ರಮದ ಪ್ರಮುಖ ಕಿಂಗ್ಪಿನ್ಗಳಲ್ಲಿ ಒಬ್ಬ ಎಂದು ಆರೋಪ ಹೊತ್ತಿದ್ದ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ನೀರಾವರಿ ಇಲಾಖೆಯ ಎಇ ಮಂಜುನಾಥ್ ಮೇಳಕುಂದಿ ಭಾನುವಾರ ಸಿಐಡಿ ಪೊಲೀಸರ ಎದುರು ಶರಣಾನಾಗಿದ್ದಾನೆ.
ಆಟೋದಲ್ಲಿ ಸಿಐಡಿ ಕಚೇರಿಗೆ ಬಂದ ಆರೋಪಿ ಮಂಜುನಾಥ್, ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬಂದಿದೆ. ಆದರೆ ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಗೊತ್ತಿರೋ ಮಾಹಿತಿಯನ್ನು ಸಿಐಡಿ ಅಧಿಕಾರಿಗಳಿಗೆ ತಿಳಿಸಲು ಈಗ ಕಚೇರಿಗೆ ಆಗಮಿಸಿದ್ದೇನೆ ಎಂದರು
ಅನಾರೋಗ್ಯದ ಸಮಸ್ಯೆಯಿಂದ ನಾನು ಮಂಗಳೂರಿಗೆ ಹೋಗಿದ್ದೆ. ಇವತ್ತು ಅಲ್ಲಿಂದ ಬಂದಿದ್ದೇನೆ. ಅಕ್ರಮದಲ್ಲಿ ಭಾಗಿಯಾಗಿರೋರು ಯಾರು ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದ್ದಾನೆ.
ಪೊಲೀಸ್ ಸಬ್ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಕೆಲ ಆರೋಪಿತ ಅಭ್ಯರ್ಥಿಗಳು ಬಳಕೆ ಮಾಡಿದ್ದ ಬ್ಲೂ ಟೂತ್ಗಳನ್ನು ಮಂಜುನಾಥ್ ನೀಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಪ್ರಕರಣದ ಆರೋಪಿಯಾಗಿರುವ ಅಫ್ಜಲಪುರ ತಾಲೂಕಿನ ಕಾಂಗ್ರೆಸ್ ಮುಖಂಡ ರುದ್ರಗೌಡ ಪಾಟೀಲ್ನ ತಂಡದಲ್ಲಿ ಈತ ಇದ್ದ. ವಿದ್ಯುನ್ಮಾನ ಉಪಕರಣಗಳನ್ನು ಕರಾಕುವಕ್ಕಾಗಿ ಬಳಸಿದ ಆರೋಪಿ ಎನ್ನಲಾಗಿತ್ತು.
ಇದನ್ನು ಓದಿ : ಇ-ಖಾತೆಯಲ್ಲಿ ಅಕ್ರಮ: ಕನಕಪುರ ಪಿಡಿಒ ರವಿ ಆತ್ಮಹತ್ಯೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಮಪತ್ತೆಯಾಗಿದ್ದ ಮಂಜುನಾಥ್ ಕಳೆದ 21 ದಿನಗಳಿಂದ ಯಾಕೆ ಶರಣಾಗಲಿಲ್ಲ ಎಂಬ ಅನುಮಾನ ಎದುರಾಗಿದೆ.
- Bengaluru Airport : ವಿಮಾನದಲ್ಲಿ ಅಕ್ರಮವಾಗಿ 10 ಅನಕೊಂಡ ಹಾವುಗಳ ಕಳ್ಳಸಾಗಾಟ
- ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್
- ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India
- ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ : ಶಿಸ್ತು ಸಮಿತಿ ನಿರ್ಧಾರ
- ನೇಹಾ ಹತ್ಯೆ ಪ್ರಕರಣ ಸಿಐಡಿಗೆ ವರ್ಗಾವಣೆ : ರಾಜ್ಯ ಸರ್ಕಾರದಿಂದ ಘೋಷಣೆ
- ಒಂದೇ ಕುಟುಂಬದ 6 ಮಂದಿ ನೀರಿನ ಪಾಲು