ಮುಂದಿನ ದಿನಗಳಲ್ಲಿ ನಾನೂ ವೆಬ್ ಸಿರೀಸ್ ನಲ್ಲಿ ನಟಿಸುತ್ತೇನೆ. ಇತ್ತೀಚೆಗೆ ವೆಬ್ ಸಿರೀಸ್ ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವೆಬ್ ಸಿರೀಸ್ ಬಗ್ಗೆ ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.
OTT, APP ರಿಲೀಸ್ ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, ತಂತ್ರಜ್ಞಾನಕ್ಕೆ ನಾವು ಹೊಂದಿಕೊಳ್ತಾ ಹೋಗಬೇಕು. ಸಿನಿಮಾ ಮಾಡೋದಷ್ಟೇ ಅಲ್ಲ ನಿರ್ಮಾಣ ಮಾಡ್ತೀವಿ. ವೆಬ್ ಸಿರೀಸ್ ನಿರ್ಮಾಣವನ್ನೂ ಮಾಡುತ್ತೇವೆ. ವೆಬ್ ಸಿರೀಸ್ ನಿರ್ಮಾಣದಲ್ಲಿ ಮಗಳು ಕೂಡ ಭಾಗಿಯಾಗುತ್ತಾಳೆ ಎಂದು ಹೇಳಿದರು.
ನಾನು ಯಂಗ್ ಕಾಣ್ತೀನಿ ಅಂತ ಎಲ್ಲರೂ ಹೇಳ್ತಾರೆ. ಯಂಗ್ ಗಿಂತಲೂ ಹೆಂಗೆಂಗೋ ಇರಲು ಇಷ್ಟ ನನಗೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಹಿಂದಿ ರಾಷ್ಟ್ರಭಾಷೆ ವಿವಾದದ ವಿಚಾರವಾಗಿಯೂ ಮಾತನಾಡಿದ ಶಿವಣ್ಣ, ಎಲ್ಲಾ ಭಾಷೆಯೂ ಒಂದೇ ಎಂದು ರಾಷ್ಟ್ರಗೀತೆಯಲ್ಲಿದೆ. ಮಾತೃಭಾಷೆ ವಿಚಾರಕ್ಕೆ ಬಂದರೆ ಕನ್ನಡವೇ ನಮಗೆ ಮುಖ್ಯ. ನಮ್ಮ ಎಲ್ಲಾ ಭಾಷೆಯೂ ಭಾರತದ್ದೆ. ನಾವೆಲ್ಲರೂ ಒಂದೇ. ಭಾರತದಲ್ಲಿ ಎಲ್ಲಾ ಭಾಷೆಯೂ ಇದೆ. ನನಗೆ ಕನ್ನಡವೇ ಮುಖ್ಯ ಎಂದು ಹೇಳಿದ್ದಾರೆ.
- ಗುಡ್ ನ್ಯೂಸ್ ನೀಡಿದ ಮಿಲನಾ – ಡಾರ್ಲಿಂಗ್ ಕೃಷ್ಣ ದಂಪತಿ
- ಸಿಹಿ ಸುದ್ದಿ ನೀಡಿದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್
- ರಶ್ಮಿಕಾ ಮಂದಣ್ಣ “ಸಾವಿನಿಂದ ಪಾರಾದ” ಪೋಸ್ಟ್
- IAF ಘನತೆಗೆ ಧಕ್ಕೆ – ಹೃತಿಕ್ ರೋಷನ್, ದೀಪಿಕಾ ಪಡುಕೋಣೆಗೆ ನೋಟಿಸ್
- ಯಶ್ ಕಟೌಟ್ ಕಟ್ಟುವ ಮುನ್ನ ವಿದ್ಯುತ್ ತಂತಿ ತಗುಲಿ ಮೂವರು ಯುವಕರ ಸಾವು :ಮೂವರಿಗೆ ಗಾಯ
- ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತ
- ನಾ ನಿನ್ನ ಮರೆಯಲಾರೆ !
- ಹಿರಿಯ ನಟಿ ಲೀಲಾವತಿ ಇನ್ನಿಲ್ಲ
- Rocking Star ಯಶ್ ನಟನೆಯ ‘ಟಾಕ್ಸಿಕ್ ’ ಸಿನಿಮಾ ಟೈಟಲ್ ರಿಲೀಸ್