ಸಾಹಿತ್ಯ

ಕರುನಾಡಿನ ಒಂದೊಂದು ಜಿಲ್ಲೆಗಳ ಕಿರು ಪರಿಚಯ – 2 – ಕಲಬುರಗಿ

ಕಲಾವತಿ ಪ್ರಕಾಶ್

ಕಲ್ಲಿನಿಂದ ಕೂಡಿದ ನೆಲವಿದು
ಕಲಬುರಗಿ ಎಂದು ಹೆಸರು ಪಡೆದಿದೆ
ಆರನೇ ಶತಮಾನದಿಂದಲೇ
ಅಸ್ತಿತ್ವವನು ಹೊಂದಿದೆ

ಕಲಬುರಗಿಯ ಕೋಟೆಯಲ್ಲಿ
ರಾಷ್ಟ್ರಕೂಟ ಹೊಯ್ಸಳರು
ಬಹಮನಿ ರಾಜ ದೆಹಲಿ ಸುಲ್ತಾನರು
ಆಳ್ವಿಕೆಯನ್ನು ಮಾಡಿದರು

ಕೋಟೆಯೊಳಗೆ ಇರುವ ಫಿರಂಗಿಯು
ಜಗದೊಳಗೇನೇ ದೊಡ್ಡದು
ಕೋಟೆಯಲ್ಲಿನ ಜಮಾ ಮಸೀದಿಯು
ಮೋರಿಷ್ ವಾಸ್ತು ಶಿಲ್ಪದಲ್ಲಿಹುದು

ವಾರಂಗಲ್ ರಾಜ ಗುಲ್ಚಂದ್ರವರು
ಇಲ್ಲಿನ ಕೋಟೆ ಕಟ್ಟಿದರು
ಬಂದೇ ನವಾಜೆಂಬ ಸೂಫಿ ಸಂತರ
ಸಮಾಧಿ ಇಲ್ಲೇ ಮಾಡಿಹರು

ಕಬ್ಬಿಣ ಮ್ಯಾಂಗನೀಸ್ ಚಿನ್ನ ಬೆಳ್ಳಿಯ
ನಿಕ್ಷೇಪಗಳು ಇಲ್ಲಿ ಸಿಕ್ಕಿವೆ
ಕರ್ನಾಟಕದೆರಡನೇ ದೊಡ್ಡ ಜಿಲ್ಲೆಯೊಳು
ಭೀಮಾ ಕೃಷ್ಣೆಯರೆಂಬ ನದಿಗಳಿವೆ

ತೊಗರಿ ಕಡಲೆ ಉದ್ದು ಜೋಳ ಇಲ್ಲಿನ ಮುಖ್ಯ ಬೆಳೆ
ಕೃಷ್ಣ ಭೀಮೆಯರು ಹರಿದು ತಂಪಾಗಿಸಿವೆ ಇಳೆ
ಶರಣಬಸಪ್ಪನ ಕೆರೆ ಅಪ್ಪನ ಗುಡಿ ಈ ಊರಿಗೇ ಕಳೆ
ಜಿಲ್ಲೆಯ ಸಮೃದ್ಧ ಗೊಳಿಸಿವೆ ಈ ವಿಶೇಷತೆಗಳೇ

ಶರಣ ಬಸವೇಶ್ವರರ ಧಾರ್ಮಿಕ
ನೆಲೆಯೂ ಈ ಊರು
ಹದಿನೆಂಟನೆ ಶತಮಾನದಲ್ಲೇ
ಮಹಾನ್ ದಾಸೋಹಿಯಾಗಿದ್ದವರು

ಭಾರತದಲ್ಲೇ ಅತಿ ಹಿರಿದೆಂಬ ಹೆಸರು
ಬುದ್ಧವಿಹಾರಕೆ ಸಿಕ್ಕಿಹುದು
ಸಾಹಿತ್ಯ ಸೇವೆಯೊಳಗನೇಕ ಮೊದಲುಗಳ
ಮಾನ್ಯತೆ ಪಡೆದ ಜಿಲ್ಲೆಯಿದು

ಕೇಂದ್ರ ಸಾಹಿತ್ಯದಕಾಡೆಮಿಯ
ಹಂಪಿ ವಿಶ್ವ ವಿದ್ಯಾಲಯದ
ನಾಡೋಜ ಪ್ರಶಸ್ತಿಗಳ ಪಡೆದ
ಮೊದಲ ಮಹಿಳಾ ಸಾಹಿತಿಯಾದ

ಕರ್ನಾಟಕ ಸಾಹಿತ್ಯ ಅಕಾಡೆಮಿಯ
ಪ್ರಥಮ ಮಹಿಳಾ ಅಧ್ಯಕ್ಷೆಯಾದ
ಗೀತಾ ನಾಗಭೂಷಣ್ ನಮ್ಮಯ ಹೆಮ್ಮೆಯ
ಕಲಬುರಗಿ ಜಿಲ್ಲೆಯ ಮನೆ ಮಗಳಿವಳು.

Team Newsnap
Leave a Comment
Share
Published by
Team Newsnap

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024