ಕಲಾವತಿ ಪ್ರಕಾಶ್
ಬೆಂಗಳೂರು
ಬೆಟ್ಟದ ಮೇಲೆ ಕೋಟೆ ಕಟ್ಟಿ
ಆಳ್ವಿಕೆ ನಡೆಸಿದ ಚಾಲುಕ್ಯರು
ಕೋಟೆಯನ್ನು ಬಲಪಡಿಸಿದಂಥ
ಹೆಮ್ಮೆಯ ರಾಜರು ಯಾದವರು
ಬೆಟ್ಟ ಎಂದರೆ ಗಿರಿಯೆಂದರ್ಥ
ಆಳ್ವಿಕೆ ಮಾಡಿದರು ಯಾದವರು
ಗಿರಿಯ ಮೇಲಿನರಮನೆ ಆಳಿದ
ಯಾದವರಿಂದ ಯಾದಗಿರಿ ಈ ಊರು
ಬೆಟ್ಟದ ಮೇಲೆ ಸಿಡಿಲು ಬಡಿಯಲು
ಬಂಡೆಯೊಡೆದು ಆಯಿತು ಬಾವಿ
ಬರಗಾಲದಲ್ಲೂ ಬತ್ತದ ಒಣಗದ
ತಣ್ಣನೆ ಕೊರೆಯುವ ನೀರಿನ ಬಾವಿ
ಯಾದಗಿರಿಯನು ಕಲ್ಯಾಣ
ಕರುನಾಡ ಹೃದಯವೆಂದೆನ್ನುವರು
ಇದೇ ಜಿಲ್ಲೆಯ ಸುರಪುರವಾಳಿದ
ವೆಂಕಟಪ್ಪನೆಂಬ ರಾಜರು
ಹೆಮ್ಮೆಯ ನಾಡೊಳು ಕಳಚೂರಿ ಚಾಲುಕ್ಯ
ಪರ್ಶಿಯನ್ನರ ಶಾಸನ ಉಂಟು
ಕೃಷ್ಣಾ ನದಿಯ ಬಸವಸಾಗರ
ಜಲಾಶಯವೂ ಇಲ್ಲುಂಟು
ಕನ್ನಡ ನಾಡಿನ ಎರಡನೆ ದೊಡ್ಡ
ಪಕ್ಷಿ ಧಾಮವು ಬೋನಾಳ
ಸುಂದರ ಶಿಲ್ಪ ಕಲೆಯ ನಾಡಲಿ
ನೋಡಲು ಬನ್ನಿ ಕೋಟೆಗಳ
ದೈವ ಭಕ್ತಿಯಲಿ ವಿಶಿಷ್ಟವಾದ
ಊರೊಂದಿಹುದು ಮೈಲಾಪುರ
ಇಲ್ಲಿನ ಊರಿನ ಅಧಿದೇವತೆಯೆ
ಗುಹೆಯ ಮೈಲಾರ ಲಿಂಗೇಶ್ವರ
ಕೋಳಿ ಸಾಕರು ಮಂಚ ಬಳಸರು
ಕುದುರೆ ಏರರು ಮಡಕೆ ಮಾಡರು
ಗದ್ದುಗೆ ಮೇಲೆ ಮಲ್ಲಯ್ಯ ಕುಳಿತರೆ
ಮಂಚ ಬಳಸಲಾರರು ಈ ಭಕ್ತರೆ
ಶೂರ ವೀರರನು ಶರಣ ಭಕ್ತರನು
ಪಡೆದ ಜಿಲ್ಲೆಯು ಯಾದಗಿರಿ
ಕನ್ನಡ ನಾಡಿನ ಹೆಮ್ಮೆ ಇತಿಹಾಸಕೆ
ಹೆಸರುವಾಸಿ ಈ ಯಾದವಗಿರಿ
2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More
ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More
ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್ನಲ್ಲಿ ಘೋಷಣೆ… Read More
ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More
ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More
This website uses cookies.
Leave a Comment