ಒಂಟಿಯಾಗಿ ವಾಸಿಸುತ್ತಿದ್ದ ವೃದ್ದೆಯನ್ನು ಹತ್ಯೆ ಮಾಡಿದ ಘಟನೆ
ಮಂಡ್ಯದ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ಜರುಗಿದೆ.
ವೃದ್ದೆಯನ್ನು ಹತ್ಯೆ ಮಾಡಿ, ಕತ್ತು ಕಿವಿಯಲ್ಲಿದ್ದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ.
ಕೋಟೆಮಾಳ ಬೀದಿಯ ಮಂಗಳಮ್ಮ(75) ಹತ್ಯೆಯಾದ ವೃದ್ದೆ
ತಡರಾತ್ರಿ ಹತ್ಯೆ ಮಾಡಿ ವೃದ್ದೆಯ ಬಳಿ ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ.
ಸ್ಥಳಕ್ಕೆ ಕೆ.ಆರ್.ಎಸ್.ಪೊಲೀಸರು ಭೇಟಿ ಪರಿಶೀಲನೆ ಮಾಡಿದರು
ಕೆ.ಆರ್.ಎಸ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.