ಹಿರಿಯೂರು ತೇರು ಮಲ್ಲೇಶ್ವರ ರಥೋತ್ಸವದಲ್ಲಿ ಆರ್ ಸಿಬಿ ಅಭಿಮಾನಿಯೊಬ್ಬ ಬಾಳೆಹಣ್ಣಿನ ಮೇಲೆ ಈ ಬಾರಿ ಕಪ್ ನಮ್ದೆ ಎಂದು ಬರೆಯುವ ಮೂಲಕ ದೇವರಲ್ಲಿ ವಿಭಿನ್ನವಾಗಿ ಪ್ರಾರ್ಥಿಸಿದ್ದಾನೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ನಡೆದ ರಥೋತ್ಸವದಲ್ಲಿ ಅಭಿಮಾನಿಯೊಬ್ಬ ಈ ಸಲ ಕಪ್ ನಮ್ದೆ, ಜೈ ಆರ್ಸಿಬಿ ಎಂದು ಬಾಳೆಹಣ್ಣಿನ ಮೇಲೆ ಬರೆದು ತೇರಿಗೆ ಎರಡು ಕೈಗಳನ್ನು ಜೋಡಿಸಿ ಬೇಡಿಕೊಂಡು ಬಾಳೆಹಣ್ಣನ್ನು ತೇರಿನ ಮೇಲೆಸೆದು ಪ್ರಾರ್ಥಿಸಿದ್ದಾನೆ.
ಕಳೆದ 14 ವರ್ಷಗಳಿಂದ ಐಪಿಎಲ್ ನಲ್ಲಿ ಆರ್ ಸಿ ಬಿ ಗೆಲುವನ್ನು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆರ್ಸಿಬಿ ಕೊನೆಯ ಹಂತದವರೆಗೂ ತಲುಪಿ ಸೋಲನ್ನುಭವಿಸುತ್ತಿದೆ. ಹೀಗಾಗಿ ಅಭಿಮಾನಿ ಈ ಬಾರಿ ಆರ್ಸಿಬಿ ಗೆಲ್ಲಲೆಬೇಕೆಂದು ವಿಭಿನ್ನವಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.