ಗುಂಡ್ಲುಪೇಟೆ: ಟ್ರ್ಯಾಕ್ಟರ್ ಸಾಲ ಪಾವತಿಸದ ರೈತನಿಗೆ ಕಂಪನಿಯಿಂದ ಕಿರುಕುಳ : ಆತ್ಮಹತ್ಯೆ ಮಾಡಿಕೊಂಡ ರೈತ

Team Newsnap
1 Min Read
Gundlupet: The farmer was harassed by company committed suicide ಗುಂಡ್ಲುಪೇಟೆ:ಟ್ರ್ಯಾಕ್ಟರ್ ಸಾಲ ಪಾವತಿಸಿದ ರೈತನಿಗೆ ಕಂಪನಿಯಿಂದ ಕಿರುಕುಳ : ಆತ್ಮಹತ್ಯೆ ಮಾಡಿಕೊಂಡ ರೈತ

ಖಾಸಗಿ ಫೈನಾನ್ಸ್ ಕಂಪನಿ ಕಿರುಕುಳಕ್ಕೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಗುಂಡ್ಲುಪೇಟೆ ತಾಲೂಕಿನ ನೇನೇಕಟ್ಟೆ ಗ್ರಾಮದಲ್ಲಿ ನಡೆದಿದೆ.

ಕೃಷ್ಣಯ್ಯ (65) ಮೃತ ರೈತ. ಮೃತ ರೈತ ಕೃಷ್ಣಯ್ಯ ಖಾಸಗಿ ಫೈನಾನ್ಸ್​​‌ನಿಂದ ಟ್ರಾಕ್ಟರ್ ಸಾಲಕ್ಕೆಂದು 7 ಲಕ್ಷ ರು ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರಂತೆ.ಬಿಸಿಸಿಐನ 36ನೇ ಅಧ್ಯಕ್ಷರಾಗಿ ಕನ್ನಡಿಗ ರೋಜರ್ ಬಿನ್ನಿ ನೇಮಕ

ಇಎಂಐ ಕಟ್ಟದ ಕಾರಣ ಆರು ತಿಂಗಳ ಹಿಂದೆ ರೈತನ ಟ್ರಾಕ್ಟರ್ ಅನ್ನು ಸೀಜ್​​​ ಮಾಡಲಾಗಿತ್ತು. ಹೀಗಾಗಿ ಅವಮಾನ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment