ಸಾಹಿತ್ಯ

ರಾಷ್ಟ್ರಕವಿ ಗೋವಿಂದ ಪೈ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ…’

ಈ ಪದ್ಯವನ್ನು ಯಾರು ತಾನೆ ಕೇಳಿಲ್ಲ ಈ ಗೀತೆ ಬರೆದ ಕವಿಯೇ ಮಂಗಳೂರು ಗೋವಿಂದ ಪೈ.ಕರ್ನಾಟಕದ ಪ್ರಪ್ರಥಮ ರಾಷ್ಟ್ರಕವಿಗಳಾಗಿ ಪ್ರಸಿದ್ದರಾಗಿದ್ದಾರೆ.

ಕೇರಳದ ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ. ರಾಜ್ಯ ಪುನರ್‌ ವಿಂಗಡಣೆಯಾದಾಗ ಕಾಸರಗೋಡು ಕೇರಳದ ಪಾಲಾಯಿತು. ತೀವ್ರ ಹಳಹಳಿಸಿದ ಪೈಗಳು ತಮ್ಮ ಹೆಸರಿನೊಂದಿಗೆ ಸದಾ ಮಂಜೇಶ್ವರ ಎಂದು ‘ಎಂ’ ಸೇರಿಸಿಕೊಂಡರು.

ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು 1883 ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು, ತಂದೆ ಮಂಗಳೂರಿನ ಸಾವುಕಾರ ತಿಮ್ಮಪ್ಪ ಹಾಗೂ ತಾಯಿ ದೇವಕಿಯಮ್ಮ.

ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂ. ಗೋವಿಂದ ಪೈ. ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಬಿ.ಎ. ವ್ಯಾಸಂಗವನ್ನು ಮಾಡುತ್ತಿದ್ದರು. ಸ್ವಂತ ವ್ಯಾಸಂಗದಲ್ಲೇ ಕನ್ನಡ, ಇಂಗ್ಲಿಷ್, ಗ್ರೀಕ್, ಫ್ರೆಂಚ್, ಸಂಸ್ಕೃತ, ಜರ್ಮನ್, ಪ್ರಾಕೃತ ಮೊದಲಾದ ದೇಶ – ವಿದೇಶಗಳ ಭಾಷೆಗಳನ್ನು ಕಲಿತರು.

ಸಂಶೋಧನೆಯಲ್ಲಿ ತೊಡಗಿದ ಗೋವಿಂದ ಪೈ ಅವರು ಹಳಗನ್ನಡ ವಿದ್ವಾಂಸರೂ ಕವಿಗಳೂ ಆಗಿದ್ದರು. ಗೋವಿಂದ ಪೈ ಅವರು ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಬಂಗಾಲಿ, ಸಂಸ್ಕೃತ, ಪಾಳಿ, ಮರಾಠಿ, ಜರ್ಮನ್ ಸೇರಿದಂತೆ ಒಟ್ಟು 25 ಭಾಷೆ ಕಲಿತಿದ್ದರು. ಮೈಸೂರು ವಿ.ವಿ. ಇವರಿಗೆ ನೀಡಬೇಕೆಂದಿರುವ ಗೌರವ ಡಾಕ್ಟರೇಟ್ ನ್ನು ಅವರು ನಯವಾಗಿ ತಿರಸ್ಕರಿಸಿದರು.

ಇದನ್ನು ಓದಿ : ಮಹಾನ್ ವ್ಯಕ್ತಿತ್ವದ ಡಿವಿಜಿ ಗೆ ನಮನಗಳು

ಗೋವಿಂದ ಪೈ ಅವರಿಗೆ ಸಾಹಿತ್ಯ ಪರಿಷತ್ತು 1951 ರಲ್ಲಿ ಬೊಂಬಾಯಿಯಲ್ಲಿ ನಡೆದ 34 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು. ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತು. ಪೈಯವರನ್ನು 1949 ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರು ರಚಿಸಿದ, ‘ಕುಲವಧು’ ಚಿತ್ರಕ್ಕಾಗಿ ಬಳಸಿಕೊಳ್ಳಲಾದ, ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಕನ್ನಡದ ಕೋಗಿಲೆ ಎಸ್ ಜಾನಕಿ ಹಾಡಿರುವ ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ’ ಹಾಡು. ಕನ್ನಡ ಭಾಷೆ ಜೀವಂತವಿರುವ ತನಕ ಈ ಹಾಡು ಕನ್ನಡಿಗರ ಮನದಲ್ಲಿ ಮಾರ್ದನಿಸುತ್ತಲೇ ಇರುತ್ತದೆ.

ಗೋವಿಂದ ಪೈ ಅವರು ಮಂಜೇಶ್ವರದಲ್ಲಿ 6-9-1963 ರಲ್ಲಿ ನಿಧನರಾದರು. ಗೋವಿಂದ ಪೈ ಅವರ ಕೈ ಬರಹದಲ್ಲಿ ಕವಿತೆ ತಾಯೆ ಬಾರ ಮೊಗವ ತೋರ.

ಗೋವಿಂದ ಪೈ ಅವರ ಕವನ ಸಂಕಲನಗಳು:

  1. ಗಿಳಿವಿಂಡು
  2. ನಂದದೀಪ
  3. ಹೃದಯ ರಂಗ
  4. ವಿಟಂಕ
  5. ಇಂಗಡಲು (ಆಯ್ದ ಕವನಗಳು)

ಖಂಡಕಾವ್ಯಗಳು

  1. ಗೊಲ್ಗೊಥಾ
  2. ವೈಶಾಖಿ

ನಾಟಕಗಳು

  1. ಹೆಬ್ಬೆರಳು
  2. ಚಿತ್ರಭಾನು ಅಥವಾ ೧೯೪೨
  3. ತಾಯಿ
  4. ಜಪಾನಿನ ‘ನೋ’ ನಾಟಕಗಳು

ಪ್ರಬಂಧ ಸಂಕಲನ

  • ಕನ್ನಡದ ಮೊರೆ (ಆತ್ಮಕಥನಗಳು, ಭಾಷಣಗಳು ಮತ್ತು ಲೇಖನಗಳು)

ಗದ್ಯಾನುವಾದ

  • ಶ್ರೀಕೃಷ್ಣಚರಿತ್ರ (ಬಂಗಾಳಿಯ ನವೀನಚಂದ್ರ ಸೇನರ ಕೃತಿ )
ಇದನ್ನು ಓದಿ : ಮೇಲುಕೋಟೆಯ (Melukote) ಮುಕುಟಕ್ಕೆ ಸಾಹಿತಿ ಪುತಿನ ಮೇರು ಕಿರೀಟ

ಇತರೆ ಕೃತಿಗಳು

  • ಮೂರು ಉಪನ್ಯಾಸಗಳು
  • ಗೋವಿಂದ ಪೈ ಅವರ ಕೆಲವು ಪತ್ರಗಳು
  • ಗೀತಾಂಜಲಿ
Team Newsnap
Leave a Comment
Share
Published by
Team Newsnap

Recent Posts

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024