ಫೆ. 27 ರಂದು ನಡೆಯಬೇಕಿದ್ದ ಸವದತ್ತಿ ಯಲ್ಲಮ್ಮನ ‌ ಜಾತ್ರೆ ರದ್ದು

Team Newsnap
0 Min Read

ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸುಕ್ಷೇತ್ರ ಯಲ್ಲಮ್ಮನ ದೇಗುಲಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಫೆಬ್ರವರಿ 27ರಂದು ನಡೆಯಲಿರುವ ‘ಭಾರತ ಹುಣ್ಣಿಮೆ ಜಾತ್ರೆಯನ್ನೂ ಕೀಡ ರದ್ದುಪಡಿಸಲಾಗಿದೆ.

ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಗುಡ್ಡದಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಸಧ್ಯ ಕೋವಿಡ್ ಆತಂಕದಲ್ಲಿ ಈ ಸಂಭ್ರಮಕ್ಕೆ ಬ್ರೇಕ್‌ ಬಿದ್ದಿದೆ.

ಈ ನಡುವೆಯೂ ಸಾವಿರಾರು ಭಕ್ತರು ಗುಡ್ಡಕ್ಕೆ ಬರುತ್ತಿದ್ದಾರೆ. ಅಲ್ಲಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಅಲ್ಲೇ ನೈವೇದ್ಯ ಸಿದ್ಧಪಡಿಸಿ ದೇವಿಗೆ ಸಮರ್ಪಿಸಿ, ದೂರದಿಂದಲೇ ಏಳುಕೊಳ್ಳದ ಅಮ್ಮನಿಗೆ ನಮಿಸುತ್ತಿದ್ದಾರೆ.

Share This Article
Leave a comment