ನಟ ಜಗ್ಗೇಶ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರಿ ಎಂದು ಕೇಳಿದ್ದಾರೆ.
ಸೆಲೆಬ್ರಿಟಿಗಳ(ಅಭಿಮಾನಿಗಳ) ಪರವಾಗಿ ನಾನು ಸಾರಿ ಕೇಳುತ್ತೇನೆ. ಜಗ್ಗೇಶ್ ಅವರು ಸೀನಿಯರ್. ಅವರೇ ಮುಂದೆ. ನಾವು ಅವರ ಹಿಂದೆ ಇರುತ್ತೇವೆ. ಅವರು ಏನೇ ಮಾತಾಡಿದರೂ ನಮ್ಮ ಬಗ್ಗೆ ತಾನೇ ಮಾತಾಡಿದ್ದಾರೆ ಎಂದು ದರ್ಶನ್ ದೊಡ್ಡಗುಣ ತೋರಿಸಿದ್ದಾರೆ.
ಈ ಮೂಲಕ ವಿವಾದಕ್ಕೆ ತೆರೆ ಎಳೆದ ದರ್ಶನ್ ದೊಡ್ಡತನ ಮೆರೆದಿದ್ದಾರೆ.
ನಿರ್ಮಾಪಕರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಜಗ್ಗೇಶ್ ಅವರು ದರ್ಶನ್ ಕುರಿತಾಗಿ ಆಡಿದ ಮಾತು ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಜಗ್ಗೇಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಜಗ್ಗೇಶ್ ಕೂಡ ನಂತರದಲ್ಲಿ ಅಸಮಾಧಾನ ಹೊರ ಹಾಕಿದ್ದರು.
ಈ ಬಗ್ಗೆ ದರ್ಶನ್ ಅವರಿಗೆ ಏನೇನೂ ಗೊತ್ತಿರಲಿಲ್ಲ. ಘಟನೆ ತಮ್ಮ ಗಮನಕ್ಕೆ ಬರುತ್ತಲೇ ದರ್ಶನ್ ಜಗ್ಗೇಶ್ ಅವರಿಗೆ ಸಾರಿ ಕೇಳಿದ್ದಾರೆ.
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ
- ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ