ಎಸಿ ವಿಷ ಅನಿಲ ಸೋರಿಕೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾದ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿ ಯಲ್ಲಿ ಕಳೆದ ರಾತ್ರಿ ಜರುಗಿದೆ.
ಮನೆಯ ಮಾಲೀಕ ವೆಂಕಟ್ ಪ್ರಶಾಂತ್(42), ಪತ್ನಿ ಚಂದ್ರಕಲಾ38) ಹಾಗೂ ಮಕ್ಕಳಾದ ಅದ್ವಿಕ್(16), ಪ್ರೇರಣಾ(8) ಸಜೀವ ವಾಗಿ ದಹನವಾಗಿದ್ದಾರೆ.
ಈ ಘಟನೆಯಲ್ಲಿ ವೃದ್ಧ ದಂಪತಿಗಳಾದ ರಾಘವೇಂದ್ರ ಶೆಟ್ಟಿ ಹಾಗೂ ರಾಜಶ್ರೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿದ್ದ ಎಸಿಯ ವಿಷ ಅನಿಲ ಸೋರಿಕೆಯಾದ ನಂತರ ವಿದ್ಯುತ್ ಶಾಕ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ದುರಂತ ಸಾವು ಕಂಡಿದ್ದಾರೆ.