ವಾಣಿಜ್ಯ ತೆರಿಗೆ ಅಧಿಕಾರಿಗಳ ನಿವಾಸದ ಮೇಲೆ ACB ಅಧಿಕಾರಿಗಳ ದಾಳಿ – ಅಪಾರ ಹಣ ವಶ

Team Newsnap
1 Min Read

ಬೆಂಗಳೂರು – ಮೈಸೂರಿನ ವಾಣಿಜ್ಯ ತೆರಿಗೆ ಅಧಿಕಾರಿಗಳ ನಿವಾಸದ ಮೇಲೆ ರಾತ್ರಿ ACB ಅಧಿಕಾರಿಗಳು ದಾಳಿ ನಡೆಸಿ ಲಕ್ಷ ಲಕ್ಷ ರು ನಗದು ಮತ್ತು ಭಾರಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಸಿಟಿಓ ಸೈಯದ್ ಮೊಹಮ್ಮದ್ ಹಾಗೂ ಕಾರು ಚಾಲಕನ ಮನೆ ಮೇಲೆ ಹಾಗೂ ಮೈಸೂರಿನ ಸಿಟಿಒ ಎಂ ಯಶವಂತ್ ಹಾಗೂ ಕಾರು ಚಾಲಕ ಕೃಷ್ಣಮೂರ್ತಿ ಯ ಮಲ್ಲೇಶ್ವರಂ ನಿವಾಸದ ಮೇಲೆ ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು

ಬೆಂಗಳೂರಿನ ಅಧಿಕಾರಿ ಸೈಯದ್ ಮೊಹಮ್ಮದ್ ನಿವಾಸದಲ್ಲಿ. 3,35,300 ರು ನಗದು, 384 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಮೈಸೂರಿನಲ್ಲಿನ ಯಶವಂಶ್ ನಿವಾಸದಲ್ಲಿ 50 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ದಾಳಿಯ ವಿವರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ.

Share This Article
Leave a comment