ಕಾವೇರಿ ಮಾತೆಗೆ ಪೂಜೆ – ಜನತಾ ಜಲಧಾರೆ ಯಾತ್ರೆಗೆ ಮಾಜಿ ಪ್ರಧಾನಿ HDD ಚಾಲನೆ

Team Newsnap
1 Min Read

ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಮಾಜಿ ಪ್ರಧಾನಿ ದೇವೇಗೌಡರು ಜನತಾ ಜಲಧಾರೆ ಯಾತ್ರೆಗೆ ಶನಿವಾರ ಚಾಲನೆ ನೀಡಿದರು. KRS ಡ್ಯಾಂ ಬಳಿಯ ಕಾವೇರಿ ಮಾತೆ ಪ್ರತಿಮೆ ಪೂಜೆ ಮಾಡಿದ ದೇವೇಗೌಡರು ಜಲಧಾರೆ ಯಾತ್ರೆಯ ಯಶಸ್ವಿಗೆ ಸಂಕಲ್ಪ ಮಾಡಿದರು.

KRS ಡ್ಯಾಂನ ಮುಖ್ಯ ದ್ವಾರದ ಬಳಿ ನಡೆಯುತ್ತಿರುವ ಪೂಜಾ ಕೈಂಕರ್ಯ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ 108 ಕಾವೇರಿ ನೀರು ತುಂಬಿದ ಕಳಸದ ಗಂಗಾ ಪೂಜೆ ಮಾಡಿದರು.

ಪೂಜೆ ನಂತರ ಜನತಾ ಜಲಧಾರೆ ಯಾತ್ರೆಗೆ ಚಾಲನೆ. ನೀಡಿದರು, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸಿ.ಎಸ್.ಪುಟ್ಟರಾಜು, ಎಂ.ಶ್ರೀನಿವಾಸ್ ಸೇರಿದಂತೆ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು.

Share This Article
Leave a comment