ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಶಿವಮೊಗ್ಗ ಯುವಕನ ಮೃತದೇಹ ಪತ್ತೆ

Team Newsnap
1 Min Read

ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆಗೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್​​ ರಕ್ಷಣೆ ಮಾಡಲು ಹೋಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅದರಂತೆ ಗ್ರಾಮದ ಮಿಥಿನ್ (28) ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದರು.

ಬಸನಪುರ ವಾರ್ಡ್​ ಎಸ್​.ಆರ್ ಬಡಾವಣೆಯಲ್ಲಿ ಗಾಯಿತ್ರಿ ಲೇಔಟ್ ವ್ಯಾಪ್ತಿಯ ರಾಜಕಾಲುವೆ ಬಳಿ ದುರ್ಘಟನೆ ನಡೆದಿತ್ತು. ಮಿಥಿನ್ ಕೊಚ್ಚಿ ಹೋಗಿದ 500 ಮೀ ದೂರದಲ್ಲೇ ಮೃತ ದೇಹ ಪತ್ತೆಯಾಗಿದ್ದು, ಎನ್​​ಡಿಆರ್​ಎಫ್ ಸಿಬ್ಬಂದಿ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೃತದೇಹವನ್ನು ಹೊರತೆಗೆದಿದ್ದರು.

ಇದನ್ನು ಓದಿ : ವಿಶ್ವ ಅಪ್ಪಂದಿರ ದಿನ – ಅಪ್ಪ ಎಂದರೆ ಆಕಾಶ

ಸದ್ಯ ಯುವಕನ ಮೃತದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆ ಮಾಡಿದ್ದಾರೆ.

Share This Article
Leave a comment