ಜೆಡಿಎಸ್ ಹೊಗಳಿದ ದಿ.ಅನಂತ್​ಕುಮಾರ್ ಪುತ್ರಿ: ರಾಜಕೀಯ ವಲಯದಲ್ಲಿ ಅಚ್ಚರಿ!

Newsnap Team
1 Min Read

ಕೇಂದ್ರದ ಮಾಜಿ ಸಚಿವ ದಿವಂಗತ ಅನಂತ್​ಕುಮಾರ್ ಪುತ್ರಿ ವಿಜೇತಾ ಅನಂತ್​​​ಕುಮಾರ್ ಜೆಡಿಎಸ್​ ಹೊಗಳಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ ರಾಜಕಾರಣ ಯಾಕೆ ಇಷ್ಟೊಂದು ಆಸಕ್ತಿದಾಯಕವಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಜೆಡಿಎಸ್ ಇಂದಿಗೂ ತುಂಬಾನೇ ಸ್ಟ್ರಾಂಗ್ ಆಗಿರುವ ರಾಜಕೀಯ ಪಕ್ಷವಾಗಿದೆ ಎಂದು ಬಣ್ಣಿಸಿದ್ದಾರೆ.

ವಿಜೇತಾ ಟ್ವೀಟ್​ಗೆ ಅಮನ್ ಎನ್ನುವ ಮತ್ತೊಬ್ಬ ಟ್ವಿಟರ್ ಯೂಸರ್​ ಹೌದು, ಹೌದು 1 ಅಥವಾ 2 ಲೋಕಸಭೆ ಕ್ಷೇತ್ರದಲ್ಲಿ ಮಾತ್ರ ಎಂದು ರಿಪ್ಲೈ ಮಾಡಿದರು.

ಈ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವ ವಿಜೇತಾ, ಎಲ್ಲವನ್ನೂ ಚುನಾವಣೆಯ ಗೆಲುವಿನ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ವಿಜೇತ ಅವರ ಈ ಟ್ವೀಟ್​ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಬಹುಶಃ ನಿನ್ನೆಯಷ್ಟೇ ಬಸವರಾಜ್ ಬೊಮ್ಮಾಯಿ ಮೂಲತಃ ಜನತಾ ಪರಿವಾರದಿಂದ ಬಂದವರು. ಹೀಗಾಗಿ ಅವರು ಈ ರೀತಿಯ ಟ್ವೀಟ್ ಮಾಡಿದ್ದಾರೆಯೇ ಅನ್ನೋ ಕುತೂಹಲ ಮೂಡಿಸಿದೆ.

ರಾಜ್ಯ ಕಂಡ ಅನೇಕ ಮುಖ್ಯಮಂತ್ರಿಗಳ ಹಿನ್ನೆಲೆ ಜನತಾ ಪರಿವಾರವಾಗಿದೆ. ರಾಮಕೃಷ್ಣ ಹೆಗಡೆ, ಎಸ್​​ಆರ್​ ಬೊಮ್ಮಾಯಿ, ಮ ದೇವೇಗೌಡ,  ಜೆಹೆಚ್​ ಪಾಟೀಲ್, ಸಿದ್ದರಾಮಯ್ಯ, ಬಸವರಾಜ್ ಬೊಮ್ಮಾಯಿ ಅವರ ಮೂಲ ರಾಜಕಾರಣ ಜನತಾ ಪರಿವಾರವಾಗಿದೆ. 

ವಿಜೇತ ಅವರು ಬಿಜೆಪಿ ಹಿನ್ನೆಲೆಯುಳ್ಳವರು. ಅವರ ತಂದೆ ಅನಂತ್​ಕುಮಾರ್ ಬಿಜೆಪಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದವರು. ಅವರ ತಾಯಿ ತೇಜಸ್ವಿನಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ

Share This Article
Leave a comment