ಹಲಗೂರು:
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ ಹಾಗೂ ಮಳವಳ್ಳಿಯಲ್ಲಿ ನಮ್ಮ ಪಕ್ಷದ ವಿಜಯಪತಾಕೆಯನ್ನು ಹಾರಿಸುವುದು ಶತ ಸಿದ್ದವಾಗಿದೆ ಎಂದು ಮಾಜಿ ಸಚಿವ ಪಿ ಎಂ ನರೇಂದ್ರಸ್ವಾಮಿ ತಿಳಿಸಿದರು.
ಗುರುವಾರ ಹಲಗೂರಿಗೆ ಆಗಮಿಸಿದ್ದ ಪಿಎಂ ನರೇಂದ್ರಸ್ವಾಮಿ ಕಾರ್ಯಕರ್ತರ ಜೊತೆ ಮಾತನಾಡಿ ನಂತರ ‘ನ್ಯೂಸ್ ಸ್ನ್ಯಾಪ್ ‘ ಪ್ರತಿನಿಧಿಯ ಜೊತೆ ಮಾತನಾಡುತ್ತಾ ಹಲಗೂರಿನಿಂದ ಪ್ರಾರಂಭವಾಗುವ ಪ್ರಜಾದ್ವನಿ ಕಾರ್ಯಕ್ರಮ (ಫೆ 11)ಶನಿವಾರ ಮಧ್ಯಾಹ್ನ 2 ಗಂಟೆಗೆ, ನಮ್ಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮೊದಲು ಹಲಗೂರು , ನಂತರ ಹಾಡ್ಲಿ ಸರ್ಕಲ್,ಸಭೆ ನಡೆಸಿ ಪ್ರಜಾದ್ವನಿ ಕಾರ್ಯಕ್ರಮದ ಪ್ರಚಾರ ಮಾಡುತ್ತಾರೆ ಎಂದರು.
ಈ ಬಾರಿ ಶತಾಯಗತಾಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತ ತರಬೇಕೆಂದು ಹೋರಾಟದ ಮುಂಚೂಣಿ ವಹಿಸಿರುವ ,ನಮ್ಮ ಅಧ್ಯಕ್ಷರು ಹಲವಾರು ಮುಖಂಡರುಗಳ ಜೊತೆಗೂಡಿ ಪ್ರಾರಂಭಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಿ ,ಮಳವಳ್ಳಿಯಲ್ಲಿ ನಮ್ಮ ಪಕ್ಷದ ವಿಜಯಪತಾಕೆ ಹಾರಿಸುವ ಕಾರ್ಯಕ್ರಮ ಇದಾಗಿದೆ ,ಎಲ್ಲಾ ಮತದಾರ ,ಬಂಧುಗಳು ನಮ್ಮ ಕಾರ್ಯಕರ್ತರು ಭಾಗವಹಿಸಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮಿಸಬೇಕು ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಸಂದರ್ಭದಲ್ಲಿ ಧುಂತೂರು ವಿಶ್ವನಾಥ್. ಸುಂದರ್ ರಾಜ್. ಕೃಷ್ಣಮೂರ್ತಿ. ಹೆಚ್ ವಿ ರಾಜು. ಬೇಕ್ರಿ ಜಗ. ರವೀಶ. ಸೇರಿದಂತೆ ಇನ್ನೂ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.
- ಬೆಂಗಳೂರು : ಗುರು ರಾಘವೇಂದ್ರ ಬ್ಯಾಂಕ್ನ 114 ಕೋಟಿ ರೂ. ಆಸ್ತಿ ಜಪ್ತಿ
- ಗಾಂಜಾ ಕೇಸ್. : ಪತಿ – ಪತ್ನಿ ಅಂದರ್ – ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್ ಲೇಡಿ
- ಶಾಸಕ ಮಾಡಾಳು ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ವಶಕ್ಕೆ
- ಶಾಸಕ ರಾಜೇಗೌಡರು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 35 ಲಕ್ಷ ರು ಮೌಲ್ಯದ ಕುಕ್ಕರ್ ಜಪ್ತಿ
- ಗ್ರಾಮ ಲೆಕ್ಕಿಗ ಯುವತಿ ನೇಣು ಬಿಗಿದುಕೊಂಡ ಆತ್ಮಹತ್ಯೆ
More Stories
ಕಾವ್ಯದ ಓದಿನಿಂದ ಉನ್ನತ ಆಲೋಚನಾ ಸ್ತರಗಳ ವೃದ್ಧಿ ಸಾಹಿತಿ – ರಂಗಕರ್ಮಿ ಮಹಾಮನೆ ಅಭಿಮತ
ಗೆಜ್ಜಲಗೆರೆ ಬಳಿ ಭೀಕರ ಬೈಕ್ ಅಪಘಾತ : ಯುವತಿ ಸಾವು – ಯುವಕನ ಸ್ಥಿತಿ ಗಂಭೀರ
ವೈರಮುಡಿ ಉತ್ಸವದ ಸಿದ್ದತೆ : ಜಿಲ್ಲಾಧಿಕಾರಿಗಳಿಂದ ಪರಿಶೀಲನೆ