ಗಂಗಾವತಿ ಸರ್ಕಾರಿ ಅಸ್ಪತ್ರೆಯಲ್ಲಿ ಗರ್ಭಿಣಿ ಮಾಂಗಲ್ಯ ಕದ್ದ ​ಕಳ್ಳಿ ಅಂದರ್​​..!

Team Newsnap
1 Min Read

ಆಶಾ ಕಾರ್ಯಕರ್ತೆ ಎಂದು ಹೇಳಿಕೊಂಡು ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ದೋಚಿದ ಘಟನೆ ಜಿಲ್ಲೆಯ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಜರುಗಿದೆ.

ಗರ್ಭಿಣಿ ಮಹಿಳೆಯೊಬ್ಬಳು ಚಿಕಿತ್ಸೆ ಪಡೆಯಲು ಗಂಗಾವತಿ ತಾಲೂಕು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರ ಹೆಸರಲ್ಲಿ ಬಂದ ಕಳ್ಳಿ, ಸ್ಕ್ಯಾನಿಂಗ್ ಮಾಡಿಸೋಣ ಬನ್ನಿ ಎಂದು ಆಸ್ಪತ್ರೆಯ ರೂಮ್​​ವೊಂದಕ್ಕೆ ಕರೆದುಕೊಂಡು ಹೋಗುವ ನಾಟಕ ಮಾಡಿದ್ದಾಳೆ.

ಇದನ್ನು ಓದಿ:ವರ್ಷದೊಳಗೆ ಮೊಮ್ಮಗು- ಇಲ್ಲವೇ 5 ಕೋಟಿ ಪರಿಹಾರ: ಮಗನ ವಿರುದ್ಧವೇ ದೂರು

ಈ ಸಂಗತಿ ನಂಬಿದ ಗರ್ಭಿಣಿ ಮಹಿಳೆ, ಕೊರಳಲ್ಲಿದ್ದ ಒಂದೂವರೆ ತೊಲೆ ಚಿನ್ನವನ್ನು ಆಕೆಯ ಬಳಿ ನೀಡಿದ್ದಾಳೆ. ಚಿನ್ನದ ಸರ ಕೈಗೆ ಸಿಗುತ್ತಿದ್ದಂತೆ ಆಕೆಯ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ.

ನಂತರ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ಸಂತ್ರಸ್ತ ಮಹಿಳೆ ಸಿಸಿಟಿವಿಯನ್ನು ಆಧರಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ನಕಲಿ ಆಶಾ ಕಾರ್ಯಕರ್ತೆ ರಾಯಚೂರು ಜಿಲ್ಲೆಯ ಹಂಚಿನಾಳ ಗ್ರಾಮದ‌ ನಿವಾಸಿ ಎನ್ನಲಾಗಿದೆ.

Share This Article
Leave a comment