ಆರಂಭದಲ್ಲೇ ಸೋನಿಯಾ ಗಾಂಧಿ ( Sonia Gandhi ) ಅವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ಕಾಂಗ್ರೆಸ್ನ ( Congress)ನಾಯಕರಿಗೆ ಮತ್ತಷ್ಟು ಜೋಷ್ ನೀಡಿತ್ತು.ನಕಲಿ ಮದುವೆ ಸರ್ಟಿಪಿಕೇಟ್ ಸೃಷ್ಠಿಸಿ 19 ಕೋಟಿ ರು ಆಸ್ತಿ ಕಬಳಿಸಿದ ಸುಂದರಿ ! ಪೋಲಿಸರಿಂದ ಮೂವರ ಬಂಧನ
ಮೇಲುಕೋಟೆ ( Melukote ) ವಿಧಾನಸಭಾ ಕ್ಷೇತ್ರದಲ್ಲಿ ಸಾಗುತ್ತಿರುವ ಯಾತ್ರೆಯಲ್ಲಿ ಜಕ್ಕನಹಳ್ಳಿಯಿಂದ ಸೋನಿಯಾ ಗಾಂಧಿ ಭಾಗಿಯಾಗಿದ್ದರು. ಹದಿನೈದು ನಿಮಿಷ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಅವರು ರಾಜ್ಯ ನಾಯಕರ ಜೊತೆ ನಡೆಯುತ್ತಲೇ ಮಾತುಕತೆ ನಡೆಸಿದರು. ಇಂದು ಪಾಂಡವಪುರದಿಂದ ಶುರುವಾಗಿ ಬ್ರಹ್ಮದೇವರಹಳ್ಳಿಯವರೆಗೂ ಸಾಗಲಿದೆ.
ಈ ವೇಳೆ ರಾಹುಲ್ಗೆ ಡಿ.ಕೆ. ಶಿವಕುಮಾರ್ ( D K Shivkumar ) , ಸಿದ್ದರಾಮಯ್ಯ ( Siddaramaiah ) ಸೇರಿದಂತೆ ಹೆಚ್.ಕೆ ಪಾಟೀಲ್, ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್ ಜೊತೆಯಾಗಿ ಪಾದಯಾತ್ರೆ ಮಾಡಿದರು.
ಎರಡು ದಿನದ ಹಿಂದೆ ರಾಜ್ಯಕ್ಕೆ ಬಂದಿರುವ ಸೋನಿಯಾ ಗಾಂಧಿ ಕಬಿನಿ ( Kabini ) ಹಿನ್ನೀರನಲ್ಲಿರುವ ಆರೆಂಜ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಪಾದಯಾತ್ರೆಯಲ್ಲಿ ಭಾಗಿ ಆಗಲು ರೆಸಾರ್ಟ್ನಿಂದ ಹೊರಟು, ತೂಬಿನಕೆರೆವರೆಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದರು. ಅಲ್ಲಿಂದ ಕಾರ್ ಮೂಲಕ ಜಕ್ಕನಹಳ್ಳಿಗೆ ಹೋಗಿ ಯಾತ್ರೆಯಲ್ಲಿ ಭಾಗಿಯಾದರು.
ಪಾದಯಾತ್ರೆ ಮುಗಿಸಿದ ಸೋನಿಯಾ ಗಾಂಧಿ ಅವರು, ಸೀದಾ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.
ಇನ್ನೂ, 11 ಗಂಟೆಗೆ ಖಾರದ್ಯಕೆರೆ ಬಳಿ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ 4 ಗಂಟೆಗೆ ಯಾತ್ರೆ ಮತ್ತೆ ಆರಂಭವಾಗಿ ಬ್ರಹ್ಮದೇವರಹಳ್ಳಿಯಲ್ಲಿ ಕೊನೆಗೊಳ್ಳಲಿದೆ. ಒಟ್ಟಾರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ಪಾದಯಾತ್ರೆಗೆ, ಹೋದಲೆಲ್ಲ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ.
ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More
ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More
ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್ಕಲ್ ಮಲ್ಲಾಪೂರು… Read More
ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More
ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More
ಹೆಚ್.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ್ದ ಎಸ್ಐಟಿ ಅಧಿಕಾರಿಗಳು ಎದೆ ಉರಿ… Read More
This website uses cookies.
Leave a Comment