Karnataka

ಪಾಂಡವಪುರದಿಂದ ಮತ್ತೆ ಭಾರತ್ ಜೋಡೋ ಯಾತ್ರೆ :ಸೋನಿಯಾಗೆ ಸಾಥ್ ನೀಡಿದ ಕಾಂಗ್ರೆಸ್ ನಾಯಕರು

ಎರಡು ದಿನ ದಸರಾ ( Dasara) ಹಬ್ಬದ ಬ್ರೇಕ್​ ಬಳಿಕ ಕಾಂಗ್ರೆಸ್​ನ ( Congress ) ಮುಖಂಡ ರಾಹುಲ್ ಗಾಂಧಿ ( Rahul Gandhi )ನಾಯಕತ್ವದಲ್ಲಿ ಹಮ್ಮಿಕೊಂಡಿರುವ ಭಾರತ​ ಐಕ್ಯತಾ ಯಾತ್ರೆಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಆರಂಭವಾಗಿದೆ.

ಆರಂಭದಲ್ಲೇ ಸೋನಿಯಾ ಗಾಂಧಿ ( Sonia Gandhi ) ಅವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಇದು ಕಾಂಗ್ರೆಸ್​ನ ( Congress)ನಾಯಕರಿಗೆ ಮತ್ತಷ್ಟು ಜೋಷ್​ ನೀಡಿತ್ತು.ನಕಲಿ ಮದುವೆ ಸರ್ಟಿಪಿಕೇಟ್ ಸೃಷ್ಠಿಸಿ 19 ಕೋಟಿ ರು ಆಸ್ತಿ ಕಬಳಿಸಿದ ಸುಂದರಿ ! ಪೋಲಿಸರಿಂದ ಮೂವರ ಬಂಧನ 

ಮೇಲುಕೋಟೆ ( Melukote ) ವಿಧಾನಸಭಾ ಕ್ಷೇತ್ರದಲ್ಲಿ ಸಾಗುತ್ತಿರುವ ಯಾತ್ರೆಯಲ್ಲಿ ಜಕ್ಕನಹಳ್ಳಿಯಿಂದ ಸೋನಿಯಾ ಗಾಂಧಿ ಭಾಗಿಯಾಗಿದ್ದರು. ಹದಿನೈದು ನಿಮಿಷ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಸೋನಿಯಾ ಅವರು ರಾಜ್ಯ ನಾಯಕರ ಜೊತೆ ನಡೆಯುತ್ತಲೇ ಮಾತುಕತೆ ನಡೆಸಿದರು. ಇಂದು ಪಾಂಡವಪುರದಿಂದ ಶುರುವಾಗಿ ಬ್ರಹ್ಮದೇವರಹಳ್ಳಿಯವರೆಗೂ ಸಾಗಲಿದೆ.

ಈ ವೇಳೆ ರಾಹುಲ್​ಗೆ ಡಿ.ಕೆ. ಶಿವಕುಮಾರ್ ( D K Shivkumar ) ​​, ಸಿದ್ದರಾಮಯ್ಯ ( Siddaramaiah ) ಸೇರಿದಂತೆ ಹೆಚ್.ಕೆ ಪಾಟೀಲ್, ಜೈರಾಂ ರಮೇಶ್, ದಿಗ್ವಿಜಯ್ ಸಿಂಗ್ ಜೊತೆಯಾಗಿ ಪಾದಯಾತ್ರೆ ಮಾಡಿದರು.


ಎರಡು ದಿನದ ಹಿಂದೆ ರಾಜ್ಯಕ್ಕೆ ಬಂದಿರುವ ಸೋನಿಯಾ ಗಾಂಧಿ ಕಬಿನಿ ( Kabini ) ಹಿನ್ನೀರನಲ್ಲಿರುವ ಆರೆಂಜ್​ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದರು. ಪಾದಯಾತ್ರೆಯಲ್ಲಿ ಭಾಗಿ ಆಗಲು ರೆಸಾರ್ಟ್​​​ನಿಂದ ಹೊರಟು, ತೂಬಿನಕೆರೆವರೆಗೆ ಹೆಲಿಕಾಪ್ಟರ್​ ಮೂಲಕ ಆಗಮಿಸಿದರು. ಅಲ್ಲಿಂದ ಕಾರ್​ ಮೂಲಕ ಜಕ್ಕನಹಳ್ಳಿಗೆ ಹೋಗಿ ಯಾತ್ರೆಯಲ್ಲಿ ಭಾಗಿಯಾದರು.

ಪಾದಯಾತ್ರೆ ಮುಗಿಸಿದ ಸೋನಿಯಾ ಗಾಂಧಿ ಅವರು, ಸೀದಾ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ.


ಇನ್ನೂ, 11 ಗಂಟೆಗೆ ಖಾರದ್ಯಕೆರೆ ಬಳಿ ನಾಯಕರು ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ 4 ಗಂಟೆಗೆ ಯಾತ್ರೆ ಮತ್ತೆ ಆರಂಭವಾಗಿ ಬ್ರಹ್ಮದೇವರಹಳ್ಳಿಯಲ್ಲಿ ಕೊನೆಗೊಳ್ಳಲಿದೆ. ಒಟ್ಟಾರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿರುವ ಪಾದಯಾತ್ರೆಗೆ, ಹೋದಲೆಲ್ಲ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ.

Team Newsnap
Leave a Comment

Recent Posts

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024

ನಾಳೆ ( May 9 ) SSLC ಫಲಿತಾಂಶ ಪ್ರಕಟ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ

ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More

May 8, 2024

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024