ರಾಜ್ಯದಲ್ಲಿ ಮತ್ತೆ ಭೂಗತ ಲೋಕದ ಸದ್ದು- ನಟಿ ಅನುಷ್ಕಾ ಅಣ್ಣನ ಕೊಲೆಗೆ ಸಂಚು ?

Team Newsnap
1 Min Read

ದಿವಂಗತ ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಮತ್ತೆ ವೈರತ್ವ ಸೃಷ್ಟಿಯಾಗಿದೆ.

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಣ್ಣ ಹಾಗೂ ಜಯಕರ್ನಾಟಕ ಸಂಘಟನೆ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಎಂಬ ವದಂತಿ ಹಬ್ಬಿದೆ. ಆದ್ರೆ ಮನ್ಮಿತ್ ರೈ ತಾನು ವಿದೇಶದಲ್ಲಿರುವುದಾಗಿ ತಿಳಿಸಿದ್ದಾರೆ.

ಬ್ಯುಸಿನೆಸ್ ವಿಚಾರವಾಗಿ ಮನ್ಮಿತ್​ ರೈ ವಿದೇಶಕ್ಕೆ ಹೋಗಿರುವುದಾಗಿ ಹೇಳಿದ್ದಾರೆ. ಇತ್ತ ತನಗೆ ಕೊಲೆ ಬೆದರಿಕೆ ಇದೆ ಅಂತಾ ಪೊಲೀಸ್ ಇಲಾಖೆ ಹೇಳಿದೆ ಎಂದು ಗುಣರಂಜನ್ ಶೆಟ್ಟಿ ಹೇಳಿದ್ದಾರೆ. ಇದನ್ನು ಓದಿ – ತಾಪಮಾನದಲ್ಲಿ ಇಳಿಕೆ, ಮಳೆಗಾಲ ಕರ್ನಾಟಕಕ್ಕೆ ಆಗಮನ – ರಾಜ್ಯದ ಹವಾಮಾನ ವರದಿ

anushka shetty 1

ಈ ಹಿಂದೆ ಕೂಡಾ ಮುತ್ತಪ್ಪ ರೈ ಆಪ್ತ ಬಳಗದ ಗಲಾಟೆ ಬಹಳ ಸದ್ದು ಮಾಡಿತ್ತು. ಸದ್ಯ ಗುಣರಂಜನ್​ ಶೆಟ್ಟಿಗೆ ಮನ್ಮಿತ್​ ರೈನಿಂದ ಜೀವ ಬೆದರಿಕೆ ಇದೆ ಅಂತಾ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಗುಣರಂಜನ್ ಹಾಗೂ ಮನ್ಮಿತ್ ರೈ ಇಬ್ಬರು ಕೂಡ ಮುತ್ತಪ್ಪ ರೈ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಹಿಂದೆಯೂ ಹಲವು ಬಾರಿ ಮುತ್ತಪ್ಪ ರೈ ಅಪ್ತ ಬಳಗದ ಗಲಾಟೆ ಸದ್ದು ಮಾಡಿತ್ತು.

Share This Article
Leave a comment