January 29, 2026

Newsnap Kannada

The World at your finger tips!

water

ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ವಾಟರ್ ಡಿಸ್ಪೆನ್ಸರ್ ಕೊಡುಗೆ

Spread the love

ಬನ್ನೂರಿನ ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ವಾಟರ್ ಡಿಸ್ಪೆನ್ಸರ್ ಯಂತ್ರವನ್ನು ಕೊಡುಗೆ ನೀಡಿದ್ದಾರೆ..

ಕೋವಿಡ್ -19 ಪರಿಸ್ಥಿತಿಯ ಮಧ್ಯೆ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ಶ್ರಮವನ್ನು ಪರಿಗಣಿಸಿ ಮತ್ತು ಪ್ರೆಸ್ ಕ್ಲಬ್‌ನಲ್ಲಿ ತ್ವರಿತ ಬಿಸಿ ನೀರಿನ ಸೌಲಭ್ಯ ಒದಗಿಸಲು , ಸಮಾಜ ಸೇವಕ ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ( ಕಾಳಪ್ಪ ) ವಾಟರ್ ಡಿಸ್ಪೆನ್ಸರ್ ಒಂದನ್ನು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಅರ್ಪಿಸಿದರು.

ಪತ್ರಕರ್ತರು ವೈರಸ್‌ಗೆ ಹೆಚ್ಚು ಗುರಿಯಾಗುವ ಸಾಧ್ಯತೆ ಯನ್ನು ಮನಗಂಡು ಈ ಆಧುನಿಕ ಬಿಸಿ ಮತ್ತು ತಣ್ಣೀರು ಬರುವ ಮಿಷನ್ ಅನ್ನು ನೀಡಲಾಯಿತು.

ಇದೆ ಸಂಧರ್ಭದಲ್ಲಿ
ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ರವಿ ಕುಮಾರ್, ಕಾಳಪ್ಪರವರ ಈ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ ಅವರಿಗೆ ಧನ್ಯವಾದ ಅರ್ಪಿಸಿದರು .

error: Content is protected !!