ಚನ್ನವೀರ ಕಣಿವಿ ನೆನೆದು ಕವಿ ಕಾವ್ಯ ನಮನ “ಕಣವಿ – ಕಾವ್ಯ ಕಸುಬಿ”
ಚೆಂಬೆಳಕಿನ ಹೊಂಬಿಸಿಲಿನ
ಮೆಲುನುಡಿಯ ಕಣಜ
ನುಡಿಭಕ್ತಿಯ ನಾಡಪ್ರೇಮದ
ಹೊಂಬೆಳಕದು ಸಹಜ
ವಿದ್ಯಾದಿಚೇತನ ಆತ್ಮವಿಕಾಸಿ
ಅಪ್ರತಿಮ ಹೃದಯ ಸಂಸ್ಕಾರಿ
ಸಮನ್ವಯ ಜೀವಧ್ವನಿಯ
ಕರುನಾಡಿನ ಭಾವ ಸಂಚಾರಿ
ಹೊರಳಿದ್ದು ನಡೆ ನುಡಿ
ಬೆಳಗಿ ಬೆಳಕಾಗಿಪ ಸೂರ್ಯನೆಡೆಗೆ
ಅರಳಿದ್ದು ನಾಸಿಕವ ಹಿಗ್ಗಿಸುವ
ಪರಿಮಳದ ಸಗ್ಗದೆಡೆಗೆ
ಲೆಕ್ಕಣಿ ತುಂಬೆಲ್ಲ ಮುತ್ತಿನಾಭರಣ
ಬರೆದದ್ದೆಲ್ಲ ಶಿಲ್ಪಕಲಾಕೃತಿ
ಅವ ಜೀವಂತ ಗತಿ
ನೆತ್ತರಿನ ಕೊಡುಗೆಯ ಸ್ಮೃತಿ
ಇನಿದನಿಯ ಜೇನ ಸುರಿಸಿದ
ಶಾಂತಿಯ ರೂಪ
ಗಗನದಿ ಸಾಗಿದ ಬಾಗಿದ ಮೋಡದ
ಸ್ನಿಗ್ಧತೆಯ ಭೂಪ
ವಿಶ್ವಭಾರತಿಗೆ ಕನ್ನಡದಾರತಿ
ಬೆಳಗಿದ ಭಾಗ್ಯದ ಕಾವ್ಯಾಕ್ಷಿ
ದಯೆ ಧರ್ಮಗಳ ಮೂಲ ತರಂಗ
ನುಡಿಸಿದ ನೀನೀಗ ಆಕಾಶಬುಟ್ಟಿ
ಕಿನ್ನರಿ ಲೋಕದ ಮಧು ಭಾವಜೀವಿ
ಬೆರಳು ನುಡಿಯಲು ನೀ ಕಾವ್ಯ ಕಸುಬಿ
ನೆಲಮುಗಿಲಿಗೆ ದಾರಿದೀಪದ ಬಣವಿ
ಕುಸುರಿಯ ಚಿರಂತನ ದಾಹದ ನೀ ಕಣವಿ
- ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು
- Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ
- ಪ್ರಜ್ವಲ್ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್ ಈಶ್ವರಪ್ಪ
- ರಾಜ್ಯ ಸರ್ಕಾರವೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ
- ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ
- ಕರ್ತವ್ಯಕ್ಕೆ ತೆರಳುತ್ತಿದ್ದ ಚುನಾವಣಾ ಸಿಬ್ಬಂದಿ ಹೃದಯಾಘಾತದಿಂದ ಸಾವು