ಕನ್ನಡದ ಮಣ್ಣೆನಗೆ
ಹೊನ್ನ ಹೋಲುತಲಿಹುದು,
ಕನ್ನಡದ ಮರಗಳಿದು
ರೇಷಿಮೆಯ ದಿರಿಸು!
ಕನ್ನಡದ ಹೂವುಗಳು
ಸುರಹೊನ್ನೆಯಂತಿಹುದು,
ಕನ್ನಡದ ಜಲವೆನಗೆ
ಅಮೃತಕ್ಕೂ ಮಿಗಿಲು!
ಕನ್ನಡದ ಗಾಳಿಯದು
ಚಂದನವ ಸೂಸಿಹುದು,
ಕನ್ನಡದ ಪಶು ಪಕ್ಷಿ
ಕಂಗಳಿಗೆ ಸೊಗಸು !
ಕನ್ನಡದ ನುಡಿಗಳಿಗೆ
ವಜ್ರಕಿಂತಲೂ ಬೆಲೆಯು,
ಕನ್ನಡಮ್ಮನ ಮಡಿಲೆನಗೆ
ಸ್ವರ್ಗ ಸಮಾನವು!
ಕಲೆ, ಸಾಹಿತ್ಯದ ಬೆಲೆ,
ಭವ್ಯ ಸಂಸ್ಕೃತಿ ಸೆಲೆ,
ನೃತ್ಯ, ಸಂಗೀತವು ನೆಲೆ
ಮಾಡಿರುವ ನಾಡಿದು!
ಸಹಿಷ್ಣುತೆಯೊಂದಿಗೆ
ಸ್ವಾಭಿಮಾನವೂ ಬೆರೆತು,
ನವೋನ್ನತಿಯ ಬೀಡಾಗಿ
ನಲಿಯುತಿಹ ನಾಡಿದು!
ಅಂದದಾ ಈ ನಾಡನು
ಹೆಮ್ಮೆಯಾ ಈ ಬೀಡನು
ಉಳಿಸಿ ಬೆಳೆಸುವ ಪಣವ
ತೊಡ ಬೇಕಿದೆ ನಾವಿಂದು!!
–. ಶ್ರೀವಲ್ಲಿ ಮಂಜುನಾಥ
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)