March 15, 2026

Newsnap Kannada

The World at your finger tips!

anand singh

ರಾಜಕೀಯ ಅಂತ್ಯವಾಗುತ್ತೋ ಗೊತ್ತಿಲ್ಲ : ಆನಂದ್ ಸಿಂಗ್

Spread the love

ತಮ್ಮ ರಾಜಕೀಯ ಜೀವನ ೧೫ ವರ್ಷಗಳ ಹಿಂದೆ ಆರಂಭವಾಗಿದೆ. ಅದು ಹೊಸಪೇಟೆಯ ಗೋಪಾಲ ಕೃಷ್ಣನ ದೇಗುಲದಲ್ಲಿ. ರಾಜಕೀಯ ಅಂತ್ಯವಾಗುತ್ತಾ ಇಲ್ಲೇ ಆಗುತ್ತಾ ಗೊತ್ತಿಲ್ಲ ಎಂದು ಸಚಿವ ಆನಂದ್ ಸಿಂಗ್ ಮಾರ್ಮಿಕವಾಗಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಆನಂದ್ ಸಿಂಗ್, ಆ ಗೋಪಾಲ ಕೃಷ್ಣನ ಆಶೀರ್ವಾದ, ಕೃಪೆ ಇದ್ದರೆ ಮತ್ತೆ ರಾಜಕೀಯ ಜೀವನ ಪುನರ್ ಪ್ರಾರಂಭವಾಗಬಹುದು. ಇಲ್ಲದೇ ಇಲ್ಲಿಗೆ ಅಂತ್ಯ ಅನ್ನುವುದಾದರೆ ಕೃಷ್ಣನ ಆಶೀರ್ವಾದ ಪಡೆದು ತಮ್ಮ ಹೊಸ ಜೀವನ ಪ್ರಾರಂಭಮಾಡುವ ಬಗ್ಗೆ ಆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಕಾದು ನೋಡಬೇಕು ಎಂದರು

ಬೆಂಗಳೂರಿಗೆ ಇಂದೇ ಹೋಗಬೇಕಾ ಅಥವಾ ನಾಳೆನಾ ಎಂಬ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ.‌ನಾನು ಈ ರಾಜ್ಯದ ಅತಿ ದೊಡ್ಡ ರಾಜಕಾರಣಿ ಅಲ್ಲ. ನಾಯಕನೂ ಅಲ್ಲ. ಎಲ್ಲರೂ ಹೇಳುತ್ತಾರೆ ಶಿಸ್ತಿನ ಸಿಪಾಯಿ ಅಂತ. ಇದು ನನ್ನ ಕ್ಷೇತ್ರದ ಜನತೆಗೆ ಗೊತ್ತಿದೆ. ನನ್ನ ರಾಜಕೀಯ ಜೀವನ ಒಂದು ದೊಡ್ಡ ಪ್ರಯಾಣ ಅಲ್ಲ. ರಾಜಕೀಯ ಜೀವನ ೧೫ ವರ್ಷದ್ದು. ಸಮಾಜ ಸೇವೆ ೫ ವರ್ಷದ್ದು. ಇದೇ ದೇವಸ್ಥಾನದಿಂದ ೨೦೦೦ನೇ ಇಸವಿಯಲ್ಲಿ ನನ್ನ ಜೀವನದ ಪ್ರಯಾಣ ಆರಂಭವಾಗಿದ್ದು ಈ ದೇಗುಲದಲ್ಲಿ. ಇಲ್ಲಿ ಏನೂ ಒಂದು ಶಕ್ತಿಇದೆ‌ ಎಂದರು

ನಾನು ಭ್ರಮೆಯಲ್ಲಿದ್ದೇ ಎಂದು ಅನಿಸುತ್ತಿದೆ. ಹಣ ಮಾಡಬೇಕು, ಕೊಳ್ಳೆಹೊಡಿಬೇಕು ಎಂದು ನಾನೂ ಎಂದೂ ರಾಜಕಾರಣಕ್ಕೆ ಬಂದೋನಲ್ಲ. ನಾನೇನಾದರು ತಪ್ಪು ಹೇಳಿದ್ದರೆ ಆ ಗೋಪಾಲಕೃಷ್ಣನೆ ಶಿಕ್ಷೆ ಕೊಡಲಿ ಎಂದೂ ಹೇಳಿದರು.


ಅಂದು ಮಹಾಭಾರತದಲ್ಲಿ ಅರ್ಜುನನಿಗೆ ಶ್ರೀಕರಕ್ಷೆಯಾಗಿ ಶ್ರೀಕೃಷ್ಣ ಹೇಗೆ ನಿಂತಿದ್ದನೋ ಅದೇ ರೀತಿ ನಾನು ಇಂದು ತೆಗೆದುಕೊಳ್ಳುವ ನಿರ್ಧಾರಕ್ಕೆ ಗೋಪಾಲಕೃಷ್ಣ ಬೆಂಬಲವಾಗಿ ನಿಂತಿರುತ್ತಾನೆ ಎಂಬ ಆತ್ಮವಿಶ್ವಾಸವಿದೆ ಎಂದರು.

error: Content is protected !!