ನ್ಯೂಸ್ ಸ್ನ್ಯಾಪ್
ಮುಂಬೈ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆ (ನ್ಯಾರ್ಕೋಟಿಕ್ಸ್ ಕಂಟ್ರೋಲ್ ಆಫ್ ಬ್ಯುರೋ) ಯಿಂದ ಬಂಧನಕ್ಕೊಳಗಾಗಿರುವ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ತಳ್ಳಿ ಹಾಕಿದೆ.
ಜುಲೈ 25ರಂದು ಸುಶಾಂತ್ ತಂದೆ ಕೆ.ಕೆ.ಸಿಂಗ್ ಅವರು ಪಾಟ್ನಾ ಪೋಲಿಸ್ ಠಾಣೆಯಲ್ಲಿ ಸುಶಾಂತ್ ಸಾವಿಗೆ ಪ್ರಚೋದನೆ ನೀಡಿದ್ದಾರೆಂದು ದೂರು ದಾಖಲಿಸಿದ್ದರು. ದೂರಿನನ್ವಯ ಪೋಲಿಸರು, ರಿಯಾ ಚಕ್ರವರ್ತಿ, ಆಕೆಯ ಪಾಲಕರಾದ ಇಂದ್ರಜಿತ್ ಹಾಗೂ ಸಂಧ್ಯಾ ಚಕ್ರವರ್ತಿ, ಹಾಗೂ ಕಟುಂಬದ ಸದಸ್ಯರಾದ ಶೋಯೊಕ್ ಚಕ್ರವರ್ತಿ, ಸ್ಯಾಮ್ಯವೆಲ್ ಮಿರಾಂಡ ಚಕ್ರವರ್ತಿ, ಶೃತಿ ಮೋದಿ ಅವರನ್ನು ಬಂಧಿಸಿದ್ದರು.
ಈ ಎಲ್ಲರೂ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.