Editorial

ವಿಶ್ವ ಪರಿಸರ ದಿನಾಚರಣೆ

“ಸರ್ವ ಜೀವಿನೋ – ಸುಖಿನೋ ಭವಂತು.”

ಮಹೇಶಚಂದ್ರಗುರು

ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 5ರಂದು ಜಗತ್ತಿನಾದ್ಯಂತ ಕಳೆದ 49 ವರ್ಷಗಳಿಂದ ಆಚರಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮನುಕುಲ ಮತ್ತು ಪರಿಸರದ ಮೇಲೆ ಜಗತ್ತಿನಾದ್ಯಂತ ಆಗುತ್ತಿದ್ದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ ಅಧ್ಯಯನಗಳಿಂದ ಪ್ರಭಾವಿತವಾದ ವಿಶ್ವಸಂಸ್ಥೆಯು ಸ್ಟಾಕ್ ಹೋಂನಲ್ಲಿ 5-6- 1972 ರಿಂದ 16- 6-1972 ರವರೆಗೆ ನಡೆದ ಚರ್ಚೆ ಪ್ರಕ್ರಿಯೆಗಳ ಪರಿಣಾಮವಾಗಿ 1972ರಲ್ಲಿ ವಿಶ್ವ ಪರಿಸರ ದಿನಾಚರಣೆ ಘೋಷಿತವಾಯಿತು. ಮೊಟ್ಟಮೊದಲ ವಿಶ್ವ ಪರಿಸರ ದಿನಾಚರಣೆ 5-6- 1973 ರಂದು “ಒಂದೇ ಭೂಮಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. ಹೀಗೆ ಕಳೆದು 49 ವರ್ಷಗಳಿಂದ ವಿವಿಧ ಧ್ಯೇಯ ವಾಕ್ಯಗಳೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ.
ಪ್ರಸ್ತುತ ವರ್ಷ “ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು” ಎಂಬ ಥೀಮನ್ನು ಘೋಷಿಸಲಾಗಿದೆ.
ಕಳೆದ ಐದು ದಶಕಗಳ ಈ ಆಚರಣೆಯು ಪರಿಸರ ಕುರಿತು ಜಾಗೃತಿ ಮೂಡಿಸುತ್ತಿದೆ, ಪೂರಕ ಕ್ರಿಯೆಗಳನ್ನು ಬೆಂಬಲಿಸುತ್ತಿದೆ, ಮತ್ತು ಪರಿಸರ ಸ್ನೇಹಿ ಆಲೋಚನೆ – ನಡವಳಿಕೆ – ಕ್ರಮ- ಕಾನೂನು -ನೀತಿಗಳನ್ನು ಪ್ರಭಾವಿಸುತ್ತಿದೆ.

ಪರಿಸರ ದಿನಾಚರಣೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು.

ಪರಿಸರ ಮತ್ತು ಸ್ವಯಂ ಸೇವಾ ಸಂಸ್ಥೆಗಳ ನಡುವೆ ಪ್ರಬಲ, ಅವಿನಾಭಾವ ಸಂಬಂಧ ಇದೆ. ಸಾಮಾನ್ಯವಾಗಿ ಸ್ವಯಂ ಸೇವಾ ಸಂಸ್ಥೆಗಳು, ಎಲ್ಲಾ ಧರ್ಮ- ಜಾತಿಯ, ಬಡವರು, ಮಕ್ಕಳು, ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ಬುಡಕಟ್ಟು ಜನಾಂಗ, ಅನಾರೋಗ್ಯ ಪೀಡಿತರು, ವಸತಿ ರಹಿತರಿಗೆ, ವಲಸಿಗರು……. ಹೀಗೆ ತುಂಬಾ ತುಂಬಾ ಸಂಕಷ್ಟದಲ್ಲಿರುವವರ ಸ್ವಾವಲಂಬಿ, ಸುಸ್ಥಿರ, ಘನತೆಯ ಬದುಕಿಗಾಗಿ ಕಾರ್ಯನಿರ್ವಹಿಸುತ್ತಿವೆ. ಪರಿಸರದ ಪರಿಭಾಗವೂ, ಜಗತ್ತಿನ ಆರ್ಥಿಕ ಹಾಗೂ ನೈಸರ್ಗಿಕ ಜೀವನಾಧಾರವೂ ಅದ ಮಣ್ಣು, ನೀರು, ಹಸಿರು ಮತ್ತು ಜೀವ ವೈವಿಧ್ಯತೆಗಳ ಸಂರಕ್ಷಣೆ, ಅಭಿವೃದ್ಧಿ, ಸಮರ್ಪಕ ಬಳಕೆ ಮತ್ತು ನಿರ್ವಹಣೆಯಿಂದ ಮಾತ್ರ ನಮ್ಮ ಮೇಲ್ಕಂಡ ಗುರಿ ಸಾಧಿಸಲು ಸಾಧ್ಯ.
ನಮಗೆ ಸಮುದಾಯ, ಕೃಷಿ, ಕೈಗಾರಿಕೆ, ಮಾರುಕಟ್ಟೆ, ಆರ್ಥಿಕತೆಯನ್ನು ಪರಿಸರ ಸ್ನೇಹಿಯಾಗಿ ಪ್ರಭಾವಿಸಲು, ಅದಕ್ಕೆ ಪೂರಕ ನೀತಿ – ನಿಯಮಗಳನ್ನು ರೂಪಿಸುವಂತೆ ಸರ್ಕಾರಗಳನ್ನು ಒತ್ತಾಯಿಸಲು, ಪರಿಸರ- ಪರಿಸರ ದಿನಾಚರಣೆ ಒಂದು ಪ್ರಬಲ ಅಸ್ಥ್ರ.
ಅಭಿವೃದ್ಧಿಯ ಪರಿಕಲ್ಪನೆ -ಭಾಷ್ಯ ವನ್ನು,
“ಸುಸ್ಥಿರ ಅಭಿವೃದ್ಧಿ” ಎಂದು ಬದಲಾಯಿಸುವಲ್ಲಿ ನಮ್ಮೆಲ್ಲರ ಪಾತ್ರ ಇದೆ. ನಮ್ಮ ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸುವ ಯಾವುದೇ ಕಾರ್ಯಗಳು, ಸುಸ್ಥಿರ ಅಭಿವೃದ್ಧಿಯ ಗುರಿಗಳ ಭಾಗವೇ ಆಗಿದೆ. ಅಲ್ಲಿ ಘೋಷಿಸಿರುವ – ನಿಗದಿ ಪಡಿಸಿರುವ 17 ಗುರಿಗಳು ತುಂಬಾ ಸರಳ, ಸ್ಪಷ್ಟ,
ದೃಡವಾಗಿ ರೂಪಿತವಾಗಿದೆ. ಅಲ್ಲಿನ 16 ಮತ್ತು 17ನೇ ಗುರಿಗಳಲ್ಲಿ, ಸರ್ಕಾರ ನಾಗರಿಕ ಸೇವಾ ಸಂಸ್ಥೆಗಳು ಹಾಗೂ ಸಮುದಾಯ, ಹೇಗೆ ಪರಸ್ಪರ ಸಹಭಾಗಿತ್ವದಲ್ಲಿ – ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕಾದ ಅಗತ್ಯತೆ ಅನಿವಾರ್ಯತೆಯನ್ನು ಹೇಳಿವೆ.
ಈ ಎಲ್ಲಾ ಗುರಿ ಸಾಧನೆಯಲ್ಲಿ ಪಾಲುದಾರರಾಗಿ ಕೆಲಸ ಮಾಡಲು ನಾವು ಮತ್ತಷ್ಟು ಬದ್ಧರಾಗಬೇಕಾಗಿದೆ. ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ಇದು ಸುಸ್ಥಿರ ಅಭಿವೃದ್ಧಿಗಾಗಿ ಕೆಲಸ ಮಾಡಲೇಬೇಕಾದ ಸಮಯ. ನಾನು ನಮ್ಮ ಹಳ್ಳಿಯಲ್ಲಿ ಒಂದು ರೈತ ಗುಂಪಿನ ಜೊತೆ ಕಳೆದ ವರ್ಷ ಈ ಕುರಿತು ಚರ್ಚಿಸುತ್ತಿದ್ದ ಸಮಯದಲ್ಲಿ, ಸುಮಾರು ಎರಡು-ಮೂರು ಗಂಟೆಗಳ ಚರ್ಚೆಯಲ್ಲಿ ಮೌನಿಯಾಗಿ – ನಿರ್ವಿಕಾರವಾಗಿ ಕುಳಿತಿದ್ದ ಹಿರಿಯರೊಬ್ಬರು, ಕೊನೆಯ
ಕ್ಷಣದಲ್ಲಿ ಒಂದು ಮಾತನ್ನು ಹೇಳಿದರು.
ಸರ್ ಮನುಷ್ಯ ಸ್ವಾರ್ಥಿ, ಸರ್ವೇ ಜನೋ ಸುಖಿನೋ ಭವಂತು ಎಂದರು. ಕೇವಲ ಮನುಷ್ಯ ಸುಖಿಯಾಗಿದ್ದರೆ ಸಾಲದು, ಅವನು ಒಬ್ಬನೇ ಸುಖವಾಗಿರಲು ಸಾಧ್ಯವೂ ಇಲ್ಲ. ಮನುಷ್ಯ ಈ ಪರಿಸರದ ಪ್ರಕೃತಿಯ ಒಂದು ಸಣ್ಣ ಭಾಗ ಮಾತ್ರ. ಈಗ ಅದನ್ನು ಬದಲಾಯಿಸಿ “ಸರ್ವ ಜೀವಿನೋ ಸುಖಿನೋ ಭವಂತು” ಎಂದು ಹೇಳಬೇಕಾಗಿದೆ. ಆಗ ಎಲ್ಲವೂ ಸರಿ ಹೋಗುತ್ತದೆ ಎಂದರು. ಎಂತಹ ಅದ್ಭುತ ಚಿಂತನೆ. ನಾವು ಕಲಿಯಬೇಕಾದ, ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಈ ದಿಶೆಯಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತರಾಗೋಣ, ಪರಿಸರ ದಿನಾಚರಣೆಯನ್ನು ನಮ್ಮ ಬದಲಾವಣೆಯ ಗುರಿ- ಸಾಧನೆಗೆ, ವೇದಿಕೆ – ಅಸ್ತ್ರವಾಗಿ ಬಳಸೋಣ. ಈ ದೆಸೆಯಲ್ಲಿ ನಾವೆಲ್ಲಾ ಒಗ್ಗೂಡಿ ರಾಜ್ಯಾದ್ಯಂತ ಸ್ವಾವಲಂಬಿ – ಸುಸ್ಥಿರ ಕರ್ನಾಟಕ ನಿರ್ಮಾಣಕ್ಕಾಗಿ ಕೆಲಸ ಮಾಡೋಣ.
ಸುಸ್ಥಿರ ಅಭಿವೃದ್ಧಿಗಾಗಿ
ನಾವು – ನೀವು

ಮಹೇಶಚಂದ್ರಗುರು ಅಧ್ಯಕ್ಷರು ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಬೆಂಗಳೂರು
ಹಾಗೂ
ನಿರ್ದೇಶಕರು ವಿಕಸನ ಸಂಸ್ಥೆ ಮಂಡ್ಯ.

Team Newsnap
Leave a Comment
Share
Published by
Team Newsnap

Recent Posts

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024

ಜಾಮೀನು ಅರ್ಜಿ ವಜಾ : ಮಾಜಿ ಸಚಿವ HD ರೇವಣ್ಣ ಬಂಧನ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್​.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More

May 4, 2024

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024