ಪರಿಸರವೆಂದರೆ ಪರಮಾತ್ಮ. ಪರಿಸರವೆಂದರೆ ಸಮತೋಲನ. ಪರಿಸರವೆಂದರೆ ಸಮಾನತೆ. ಪರಿಸರವೆಂದರೆ ಶುದ್ಧ ಭಾವ.
● ಪರಿಸರವು ಒಂದು ಆನೆಯನ್ನು ಸೃಷ್ಟಿಸಲು ತೆಗೆದುಕೊಂಡ ಶ್ರಮವನ್ನು ಒಂದು ಇರುವೆಯ ಸೃಷ್ಟಿಗೂ ತೆಗೆದುಕೊಂಡಿರುತ್ತದೆ. ಒಂದು ಹುಲಿಯ ಪರಿಸರ ಮುಖೇನ ಕೆಲಸಗಳು, ಒಂದು ಚಿಟ್ಟೆಯ ಪರಿಸರ ಮುಖೇನ ಕೆಲಸಗಳಿಗೆ ಸಮ. ಇಲ್ಲಿ ಹುಲಿಯೂ ಬೇಕು. ಚಿಟ್ಟೆಯೂ ಬೇಕು.
● ಕುತೂಹಲಕಾರಿ ವಿಸ್ಮಯವೆಂದರೆ ಭೂಮಿಯ ಮೇಲಿನ ಎಲ್ಲ ಕ್ರಿಮಿ-ಕೀಟಗಳು ಇಂದೇ ಸರ್ವನಾಶವಾದರೆ ಕೇವಲ ಮುಂದಿನ ನಾಲ್ಕಾರು ವರ್ಷಗಳಲ್ಲಿ ಭೂಮಿಯ ಮೇಲೆ ಉಳಿದ ಪ್ರತಿಯೊಂದು ಜೀವಿಗಳು ನಶಿಸಿ ಹೋಗುತ್ತವೆ. ಕ್ರಿಮಿ-ಕೀಟಗಳು ಗಾತ್ರದಲ್ಲಿ ಚಿಕ್ಕವು. ಅವುಗಳಿಂದ ಪ್ರಯೋಜನವೇನು ಎನ್ನುವಂತಿಲ್ಲ. ಕೀಟಗಳಿಂದ ಪರಾಗಸ್ಪರ್ಶ. ಈ ಸ್ಪರ್ಶದಿಂದಲೆ ಹೂವು,ಕಾಯಿ, ಹಣ್ಣುಗಳ, ಬೆಳೆಗಳ ಉತ್ಪಾದನೆ. ಹೀಗಾಗಿ ಪ್ರತೀ ಜೀವಿಗೂ ಸಮಾನತೆ, ಸಮನಾದ ಮಹತ್ವ ಈ ಪರಿಸರದ ಮಡಿಲಲ್ಲಿದೆ.
● ಅದೇ ಮನುಷ್ಯ ಇಂದೇ ನಾಶವಾದಲ್ಲಿ, ಭೂಮಿಯು ಹಿಂದೆಂದಿಗಿಂತಲೂ ಮೈದುಂಬಿ ನಿಲ್ಲುತ್ತದೆ. ಪ್ರಕೃತಿಯಲ್ಲಿ ಮನುಷ್ಯನಿಗಿರುವ ಬೆಲೆ ಇಷ್ಟೆ.
● ಪ್ರಾಣಿಗಳು ಉಸಿರಾಡಿ ಹೊರಬಿಟ್ಟ ಮತ್ತು ವಾಹನಗಳು, ಕಾರ್ಖಾನೆಗಳು ಹೊರಸೂಸುವ ಕಾರ್ಬನ್ ಡೈ ಆಕ್ಷೈಡ್ ನ್ನು ಮರಗಳು ಒಳಗೆ ಎಳೆದುಕೊಳ್ಳುತ್ತವೆ. ಹೀಗಾಗಿ ಕಾಡುಗಳು ಈ ಭೂಮಿಯ “ಕಾರ್ಬನ್ ಸಿಂಕ್” ಗಳಂತೆ ವರ್ತಿಸುತ್ತವೆ.
● ಮರಗಳು ಹೊರ ಸೂಸುವ ಆಮ್ಲಜನಕವು ಪ್ರಾಣಿಗಳ ಜೀವಾಳ. ಹೀಗೆ ಜೀವ-ಜೀವಗಳ ನಡುವೆ ಸಮತೋಲನವನ್ನು ಪರಿಸರವು ಕೊಡಮಾಡಿದೆ.
● ಒಂದು ಪ್ರಾಣಿ ಮರಣ ಹೊಂದಿದರೆ ಅದರ ಮೃತ ದೇಹವನ್ನು ಕೊಳೆಯುವಂತೆ ಮಾಡಿ ಮಣ್ಣಾಗಿಸಲು ಕೆಲವು ಸೂಕ್ಷ್ಮಾಣು ಜೀವಿಗಳನ್ನು ಪರಿಸರ ಸಮತೋಲನಕ್ಕಾಗಿ ಒದಗಿಸಿದೆ.
● ಭೂಮಿಯ ಮೇಲಿನ ಉಷ್ಣತೆ ಹೆಚ್ಚಾದಾಗ ಸಾಗರ, ನದಿ, ಸರೋವರಗಳನ್ನು ಆ ಹೆಚ್ಚುವರಿ ಉಷ್ಣತೆಯನ್ನು ಹೀರಿ ಉಷ್ಣತೆಯ ಸಮತೋಲನ ಕಾಪಾಡಲು ಪರಿಸರ ನಮಗೊದಗಿಸಿದೆ.
ಹೀಗೆ ಜೀವಿಸುವಾಗ ಮತ್ತು ಮರಣಿಸಿದ ಮೇಲೂ ಸಮತೋಲನವಿದೆ ಎಂದಾದರೆ ಅದು ಈ ಪರಿಸರದಿಂದ ಮಾತ್ರ.
● ಈ ಬ್ರಹ್ಮಾಂಡದಲ್ಲಿ ನಿರ್ವಾತ (vacuume) ವೇ ತುಂಬಿದೆ. ಅಲ್ಲಿ ಗಾಳಿಯಿಲ್ಲ. ಇಂತಹ ನಿರ್ವಾತದಲ್ಲಿ ಭೂಮಿಯ ಮೇಲ್ಮೈ ಗೆ ವಾತಾವರಣವೆಂಬ ಗಾಳಿಯ ಹೊದಿಕೆಯನ್ನು ಹೊದಿಸಿ ಅದರೊಳಗೆ ಪ್ರತಿ ಜೀವಿಯು ಬದುಕಲು ಅವಕಾಶ ಮಾಡಿಕೊಟ್ಟ ತಾಯಿಯ ಶುದ್ಧ ಗರ್ಭದಂತಹ ಸ್ಥಳಾವಕಾಶ ಒದಗಿಸಿದ್ದು ಈ ಪರಿಸರ.
● ‘ಅಲ್ಟ್ರಾವೈಲೆಟ್’ ನಂತಹ ಸೂರ್ಯನ ಅಪಾಯಕಾರಿ ವಿಕಿರಣಗಳನ್ನು ತಡೆದು, ಸೋಸಿ ಬಿಡುವ “ಓಝೋನ್” ಪದರವನ್ನು ಒದಗಿಸಿದ ಪರಿಸರವು ಮಕ್ಕಳನ್ನು ಕಾಪಾಡುವ ತಾಯಿಯ ಶುದ್ಧ ಭಾವದಂತೆಯೇ ಅಲ್ಲವೆ?
● ಅದೆಷ್ಟೇ ಪ್ರಾಣಿ ಪ್ರಪಂಚವು ಪರಿಸರವನ್ನು ಕಲುಷಿತಗೊಳಿಸಿದರು ಮತ್ತೆ ಮತ್ತೆ ಶುದ್ಧಿಕರಿಸಿ ಮಳೆಯನ್ನು, ಗಾಳಿಯನ್ನು ಕೊಡುವ ಪರಿಸರವು ಶುದ್ಧ ದೈವಿದತ್ತ ಭಾವವಲ್ಲವೆ?
🦋 ಶುದ್ಧವಾದ ಉಸಿರು ಕೊಡುವ, ಸಮಾನವಾಗಿ ಎಲ್ಲ ಜೀವಿಗಳನ್ನು ಪೊರೆಯುತ್ತಿರುವ ಮತ್ತು ವಿವಿಧ ಜೀವ ವೈವಿದ್ಯದ ನಡುವೆಯೂ ಸಮತೋಲನವನ್ನು ಉಳಿಸಿ ಕೊಡುವ ಪರಿಸರವನ್ನು ಮಲಿನಗೊಳಿಸದೆ ಮುಂದಿನ ಪೀಳಿಗೆಯ ವರೆಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
🦜”ಪರಿಸರವೇ ಪರಮಾತ್ಮ” ನೆನ್ನುವ ಭಕ್ತಿ ಭಾವ ಬರದ ಹೊರತು ಪರಿಸರ ಉಳಿಯುವುದಾದರೂ ಹೇಗೆ? ಕಾನೂನುಗಳು ಇನ್ನಷ್ಟು ಕಠಿಣವಾಗಬೇಕು.
🌳 “ಮರ ಕಡಿದರೆ ಮರಣ ದಂಡನೆ” ಎನ್ನುವವರೆಗೆ ಪರಿಸರ ನಾಶ ಮುಂದುವರೆಯುತ್ತಲೇ ಇರುತ್ತದೆ.
ಮೈಸೂರು : ಶ್ರೀನಿವಾಸ್ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ನಾಳೆ ಮಾಡಲಾಗುತ್ತದೆ ಎಂದು ಮಗಳು ಪ್ರತಿಮಾ ಪ್ರಸಾದ್… Read More
ಮೈಸೂರು : ಉದಯಗಿರಿ ಪೊಲೀಸ್ ಠಾಣೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಮಂದಿ… Read More
ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ (76) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಮೂತ್ರಕೋಶ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು… Read More
ರಾಯಚೂರು : ರಾಯಚೂರಿನ ತಾಪಮಾನ ಹೆಚ್ಚಳದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ನಡೆದಿದೆ. ಜನರು ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದು ,… Read More
ಬೆಂಗಳೂರು : ರಾಜ್ಯದಲ್ಲಿ 14 ಕ್ಷೇತ್ರಗಳ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು , ಮೇ 7ರಂದು ಉತ್ತರ… Read More
ಮೈಸೂರು: ಮೈಸೂರು ಕೊಡುಗು ಲೋಕಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದ್ದು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ,… Read More
This website uses cookies.
Leave a Comment