February 23, 2026

Newsnap Kannada

The World at your finger tips!

cd

ಸಿಡಿ ಗ್ಯಾಂಗ್‌ ನಲ್ಲಿ ಮಾಜಿ ಪತ್ರಕರ್ತರ ಕೂಟ ವಿಚಾರಣೆಗೆ ಯಾರ್ಯರು ಆರೋಪಗಳು ಏನು?

Spread the love

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸುತ್ತಿರುವ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಜಿ ಪತ್ರಕರ್ತರ‌ ಕೂಟವನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ವಿಚಾರಣೆ ನಡೆಸಿದೆ.

ಕೆಲ ತಿಂಗಳ ಹಿಂದೆ ಮಾಜಿ ಪತ್ರಕರ್ತ ನರೇಶ್‌ ಗೌಡ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸಿಡಿ ಗ್ಯಾಂಗ್‌ ಸದಸ್ಯರು ಎಲ್ಲರೂ ಭಾಗಿಯಾಗಿದ್ದರು. 

ಈಗ ಇವರೆಲ್ಲರೂ ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಅದು ತನಿಖಾ ತಂಡಕ್ಕೆ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.

ಗ್ಯಾಂಗ್‌ ಸದಸ್ಯರ ಪೈಕಿ ನರೇಶ್‌ ಮತ್ತು ಶ್ರವಣ್‌ ನಾಪತ್ತೆಯಾಗಿದ್ದಾರೆ, ಅವರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗುತ್ತಿದ್ದಾರೆ.

ಶಂಕಿತ ಗ್ಯಾಂಗ್ ನ‌ ಆರೋಪ ಏನು?

  • ನರೇಶ್‍ಗೌಡ:
    ತುಮಕೂರಿನ ಶಿರಾ ತಾಲೂಕಿನ ಭುವನಹಳ್ಳಿಯಲ್ಲಿರುವ ಮಾಜಿ ಪತ್ರಕರ್ತ. ಸಿಡಿ ತಯಾರಿಕೆಯಲ್ಲಿ ಪ್ರಮುಖ ಪಾತ್ರ.
  • ಶ್ರವಣ್:
    ವಿಜಯಪುರ ದೇವನಹಳ್ಳಿಯ ಮೂಲ ಶ್ರವಣ್‌ ಹ್ಯಾಕಿಂಗ್‌ ತಜ್ಞ., ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.
  • ಭವಿತ್ ದೋಣಗುಡಿಗೆ:
    ಚಿಕ್ಕಮಗಳೂರಿನ ಆಲ್ದೂರಿನ ಮಾಜಿ ಪತ್ರಕರ್ತ. ರಾಸಲೀಲೆ ಸಿಡಿಗೆ ಸ್ಕ್ರಿಪ್ಟ್, ವಾಯ್ಸ್ ಓವರ್ ನೀಡಿದ ಆರೋಪ.
  • ಆಕಾಶ್ ತಳವಾಡೆ:
    ಬೀದರ್ ಭಾಲ್ಕಿ ಮೂಲದ ಆಕಾಶ್‌ ತಳವಾಡೆ ಹವ್ಯಾಸಿ ಸಾಕ್ಷ್ಯಚಿತ್ರ ತಯಾರಕ. ಸಿಡಿಯಲ್ಲಿರುವ ಯುವತಿಯ ಸ್ನೇಹಿತ.
  • ಸಾಗರ್ ಶಿಂಧೆ:
    ಬೀದರ್ ಔರಾದ್ ಮೂಲದ ಸಾಗರ್‌ ಶಿಂಧೆ ಸೈಬರ್ ಕೆಫೆ ಉದ್ಯೋಗಿ. ಸಿಡಿ ಅಪ್‍ಲೋಡ್ ಮಾಡಿದ ಆರೋಪವಿದೆ.

ಸಿಲೋಟ್:
ರಾಮನಗರ ಮೂಲದ ಶಾಲಾ ಶಿಕ್ಷಕಿ. ಲಕ್ಷ್ಮಿಪತಿ ಸ್ನೇಹಿತೆ. ಕಲ್ಲಹಳ್ಳಿಗೆ ಸಿಡಿ ತಲುಪಿಸಿದ ಆರೋಪವಿದೆ.

error: Content is protected !!