ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಇಂದು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗ ನಡೆಯಬೇಕಿದ್ದ ಲಕ್ಷ ದೀಪೋತ್ಸವವನ್ನು ಜಿಲ್ಲಾಡಳಿತ ರದ್ದು ಮಾಡಿದೆ.
ಸಂಕ್ರಾಂತಿ ದಿನ ರಾತ್ರಿ ವಿಜೃಂಭಣೆಯಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ರದ್ದತಿಗೆ ವೀಕೆಂಡ್ ಕರ್ಪ್ಯೂ ಕಾರಣವೂ ಸೇರಿದೆ.
ಐತಿಹಾಸಿಕವಾಗಿ ಪ್ರಸಿದ್ದಿ ಹೊಂದಿರುವ ಲಕ್ಷದೀಪೋತ್ಸವ ಕಣ್ಣು ತುಂಬಿಕೊಳ್ಳಲು ಸಾವಿರಾರು ಜನ ಸೇರುತ್ತಿದ್ದರು. ಜಿಲ್ಲಾಡಳಿತ ಈಗಿನ ನಿದಾ೯ರದಿಂದಾಗಿ ಭಕ್ತರಿಗೆ ತೀವ್ರ ನಿರಾಶೆಯಾಗಿದೆ.
ಲಕ್ಷ ದೀಪೋತ್ಸವ ಬದಲಿಗೆ ಲಘು ದೀಪೋತ್ಸವ ಮಾಡಲು ಆಡಳಿತ ಮಂಡಳಿ ನಿಧ೯ರಿಸಿದೆ. ದೇವಸ್ಥಾನದ ಒಳ ಆವರಣದಲ್ಲೇ ಅಚ೯ಕರು ಮಾತ್ರ ಸಾವಿರಾರು ದೀಪ ಬೆಳಗಿಸಿ ವಿಶೇಷ ಪೂಜೆ ನಡೆಸಲು ನಿಧ೯ರಿಸಿದ್ದಾರೆ.